06.29.2019 - By Kelirondu Katheya Team
"ತಾಳಿದವನು ಬಾಳಿಯಾನು " ಅನ್ನೋ ಗಾದೆ ಕೇಳಿರಬೇಕಲ್ಲ . ಅವಸರ ಮಾಡಿದ್ರೆ ಕೆಲಸ ಹಾಳಾಗುತ್ತೆ ಅನ್ನೋದನ್ನ ಹೇಳೋ ಎರಡು ಕತೆಗಳ ಬೋನಸ್ ಕಂತು ನಮ್ಮ ಕತೆಗಳ ಸಂಗ್ರಹದಿಂದ . ಮೊದಲನೇ ಕತೆ "ಬಾಯಿಬಡುಕ ಆಮೆ ಮತ್ತು ಬಾತುಕೋಳಿಯ ಕತೆ " ಯಲ್ಲಿ , ನೀರಿಲ್ಲದೆ ಬಳಲಿದ್ದ ಆಮೆ, ಕಷ್ಟದ ಸಮಯದಲ್ಲೂ ತನ್ನ ಬಾಯಿ ಬಡುಕ ತನವನ್ನ ತೋರಿಸಿದ ಪರಿಣಾಮ ಏನಾಯ್ತು ಅನ್ನೋದನ್ನು ಕೇಳೋಣ . ಎರಡನೇ ಕತೆ " ಚಿನ್ನದ ಮೊಟ್ಟೆಯಿಡುವ ಬಾತುಕೋಳಿ " ಯಲ್ಲಿ , ದಿನಕ್ಕೊಂದು ಚಿನ್ನದ ಮೊಟ್ಟೆ ಇಡುತ್ತಿದ್ದ ಬಾತುಕೋಳಿಯನ್ನು ಇನ್ನೂ ಜಾಸ್ತಿ ಮೊಟ್ಟೆ ಪಡೆಯೋ ದುರಾಸೆಯಿಂದ ಬಾತುಕೋಳಿಯನ್ನೇ ಕಳೆದುಕೊಂಡ ರೈತನೊಬ್ಬನ ಕತೆ ಕೇಳೋಣ . ಎಂದಿನ ಹಾಗೆ , ನಿಮ್ಮ ಅಭಿಪ್ರಾಯಗಳನ್ನ [email protected] ಗೆ ಕಳಿಸಿ.