09.16.2023 - By Sadhguru Kannada
ಸದ್ಗುರುಗಳ ಒಂದು ಚೊಕ್ಕ, ಶಕ್ತಿಯುತ ಸಂದೇಶದೊಂದಿಗೆ ನಿಮ್ಮ ದಿನವನ್ನು ಸಂತೋಷದಾಯಕ, ಉತ್ಸಾಹಭರಿತವಾಗಿಸಿ. ಸದ್ಗುರುಗಳೊಂದಿಗೆ ಹಲವಾರು ವಿಷಯಗಳನ್ನು ಅನ್ವೇಷಿಸಿ, ಜೀವನದ ಪ್ರತಿಯೊಂದು ಅಂಶವು ಹೇಗೆ ಮುಂದಿನ ಹಾದಿಯನ್ನು ತೋರಿಸಬಲ್ಲದು ಹಾಗೂ ,
ನಮ್ಮಲ್ಲಿ ಹುದುಗಿರುವ ಸಾಮರ್ಥ್ಯವನ್ನು ಹೇಗೆ ಹೆಚ್ಚಿಸಬಹುದು ಎಂಬುದನ್ನು ಅರಿಯಿರಿ.
ಕೆಲವೊಮ್ಮೆ ನಮ್ಮ ಬದುಕಿನಲ್ಲಿ ನಡೆಯುತ್ತಿರುವುದೆಲ್ಲ ವಿಧಿ ಲಿಖಿತವೇನೋ ಅನ್ನಿಸುತ್ತದೆ. ಆದರೆ ಅದು ನಿಜವೇ? ಅಷ್ಟಕ್ಕೂ ಈ ’ವಿಧಿ’ಯನ್ನು ಬರೆಯುವುದು ಯಾರು? ನಮ್ಮ ಹಣೆಬರಹದ ಹಿಂದೆ ’ಕಾಣದ ಕೈ’ಯ ಕೈವಾಡವೇನಾದರೂ ಇದೆಯೇ? ನಮ್ಮ ಹಣೆಬರಹವನ್ನು ನಾವೇ ಬರೆಯಬಹುದೇ, ಬರೆದಿದ್ದನ್ನು ತಿದ್ದಬಹುದೇ? ಅದು ಯಾರಿಂದ ಸಾಧ್ಯವಿದೆ? ಆ ನಿಟ್ಟಿನಲ್ಲಿ ನಾವೇನು ಮಾಡಬೇಕು? ’ಕರ್ಮ’ ಎಂದರೇನು?
ನಮ್ಮ ’ಕರ್ಮ’ವನ್ನು ನಮ್ಮಿಂದ ಬದಲಿಸಲು ಸಾಧ್ಯವಿದೆಯೇ? ಇವಕ್ಕೆಲ್ಲ ಉತ್ತರವನ್ನು ಕೇಳಿ, ಸದ್ಗುರುಗಳ ಮಾತುಗಳಲ್ಲಿ!
ಯೋಗಿ, ಅಧ್ಯಾತ್ಮಿಕ ಚಿಂತಕ, ದಾರ್ಶನಿಕ - ಇಂತಹ ವಿಶೇಷಣಗಳಿಂದ ಗುರುತಿಸಲ್ಪಡುವ ಸದ್ಗುರುಗಳು, ಇತರರಿಗಿಂತ ಭಿನ್ನವಾಗಿ ನಿಲುವಂತಹ ಆಧ್ಯಾತ್ಮಿಕ ಗುರು. ಗಹನತೆ ಮತ್ತು ವಾಸ್ತವಿಕತೆಯನ್ನು ಒಳಗೂಡಿರುವ ಅವರ ಜೀವನ ಮತ್ತು ಕಾರ್ಯಗಳು, ಯೋಗವು ಸಮಕಾಲೀನ ವಿಜ್ಞಾನವಾಗಿದ್ದು, ನಮ್ಮ ಕಾಲಕ್ಕೆ ಅತ್ಯಗತ್ಯವಾದುದು ಎಂಬುದರ ಜ್ಞಾಪನೆಯಾಗಿದೆ.
See omnystudio.com/listener for privacy information.
Learn more about your ad choices. Visit megaphone.fm/adchoices