02.09.2020 - By Kelirondu Katheya Team
" ದಶಾವತಾರ " ಸರಣಿಯಲ್ಲಿ ಮೂರನೇ ಅವತಾರ ವರಾಹಾವತಾರ . ವರಾಹ ಅಂದರೆ ಕಾಡು ಹಂದಿ ಎಂದರ್ಥ . ಇಂಗ್ಲಿಷ್ನಲ್ಲಿ wild boar ಅಂತಲೂ ಕರೆಯುತ್ತಾರೆ . ವೈಕುಂಠದ ದ್ವಾರ ಪಾಲಕರಾದ ಜಯ - ವಿಜಯರು ಭೂಮಿಯ ಮೇಲೆ ಹಿರಣ್ಯಾಕ್ಷ ಹಾಗೂ ಹಿರಣ್ಯಕಶಿಪು ಎಂಬ ರಾಕ್ಷಸರಾಗಿ ಹುಟ್ಟುತ್ತಾರೆ . " ಯಾವುದೇ ಮನುಷ್ಯ , ಪ್ರಾಣಿ , ದೇವತೆ , ರಾಕ್ಷಸನಿಂದ ಸಾವು ಬಾರದಿರಲಿ " ಬ್ರಹ್ಮನ ವಿಚಿತ್ರ ವರದಿಂದ ಹಿರಣ್ಯಾಕ್ಷ ಅಹಂಕಾರದಿಂದ ಸಿಕ್ಕಿದ್ದನ್ನು ದ್ವಂಸ ಮಾಡಿ ಭೂಮಿ ದೇವತೆಯನ್ನು ಪಾತಾಳಕ್ಕೆ ಕರೆದು ಹೋಗಿಬಿಡುತ್ತಾನೆ . ವಿಷ್ಣು ವರಾಹ ಅವತಾರ ಧರಿಸಿ ಭೂಮಿ ದೇವತೆಯನ್ನ ಬಿಡಿಸುತ್ತಾನೆ .