09.21.2023 - By Sadhguru Kannada
ಸದ್ಗುರುಗಳ ಒಂದು ಚೊಕ್ಕ, ಶಕ್ತಿಯುತ ಸಂದೇಶದೊಂದಿಗೆ ನಿಮ್ಮ ದಿನವನ್ನು ಸಂತೋಷದಾಯಕ, ಉತ್ಸಾಹಭರಿತವಾಗಿಸಿ. ಸದ್ಗುರುಗಳೊಂದಿಗೆ ಹಲವಾರು ವಿಷಯಗಳನ್ನು ಅನ್ವೇಷಿಸಿ, ಜೀವನದ ಪ್ರತಿಯೊಂದು ಅಂಶವು ಹೇಗೆ ಮುಂದಿನ ಹಾದಿಯನ್ನು ತೋರಿಸಬಲ್ಲದು ಹಾಗೂ ,
ನಮ್ಮಲ್ಲಿ ಹುದುಗಿರುವ ಸಾಮರ್ಥ್ಯವನ್ನು ಹೇಗೆ ಹೆಚ್ಚಿಸಬಹುದು ಎಂಬುದನ್ನು ಅರಿಯಿರಿ.
ಬದುಕು ಒಂದು ರೀತಿಯಲ್ಲಿ ಅಭದ್ರ ಅನ್ನಿಸುತ್ತಿದೆಯೇ? ಜೀವನದಲ್ಲಿ ನಿಮಗೆ ಬೇರೆ ಬೇರೆ ಬಗೆಯ ಭಯಗಳು ಕಾಡುತ್ತಿವೆಯೇ? ಏಕೆ ಹೀಗೆ? ಹೀಗನಿಸುತ್ತಿದೆ ಎಂದರೆ ನಾವು ಎಡವುತ್ತಿರುವುದು ಎಲ್ಲಿ? ಏನನ್ನು ಸರಿಮಾಡಿಕೊಂಡರೆ ಇಂಥಹ ಭಯದಿಂದ ಹೊರಗೆ ಬರಬಹುದು?
ನಾವು ಜೀವನವನ್ನು ನೋಡಬೇಕಿವುದು ಯಾವ ದೃಷ್ಟಿಯಲ್ಲಿ? ಬದುಕಿನಲ್ಲಿ ಕಷ್ಟ ಎನಿಸುವ ವಿಚಾರಗಳನ್ನು ಸುಲಭವಾಗಿ ನಿಭಾಯಿಸುವುದು ಹೇಗೆ?
ಯೋಗಿ, ಅಧ್ಯಾತ್ಮಿಕ ಚಿಂತಕ, ದಾರ್ಶನಿಕ - ಇಂತಹ ವಿಶೇಷಣಗಳಿಂದ ಗುರುತಿಸಲ್ಪಡುವ ಸದ್ಗುರುಗಳು, ಇತರರಿಗಿಂತ ಭಿನ್ನವಾಗಿ ನಿಲುವಂತಹ ಆಧ್ಯಾತ್ಮಿಕ ಗುರು. ಗಹನತೆ ಮತ್ತು ವಾಸ್ತವಿಕತೆಯನ್ನು ಒಳಗೂಡಿರುವ ಅವರ ಜೀವನ ಮತ್ತು ಕಾರ್ಯಗಳು, ಯೋಗವು ಸಮಕಾಲೀನ ವಿಜ್ಞಾನವಾಗಿದ್ದು, ನಮ್ಮ ಕಾಲಕ್ಕೆ ಅತ್ಯಗತ್ಯವಾದುದು ಎಂಬುದರ ಜ್ಞಾಪನೆಯಾಗಿದೆ.
See omnystudio.com/listener for privacy information.
Learn more about your ad choices. Visit megaphone.fm/adchoices