09.17.2023 - By Sadhguru Kannada
ಸದ್ಗುರುಗಳ ಒಂದು ಚೊಕ್ಕ, ಶಕ್ತಿಯುತ ಸಂದೇಶದೊಂದಿಗೆ ನಿಮ್ಮ ದಿನವನ್ನು ಸಂತೋಷದಾಯಕ, ಉತ್ಸಾಹಭರಿತವಾಗಿಸಿ. ಸದ್ಗುರುಗಳೊಂದಿಗೆ ಹಲವಾರು ವಿಷಯಗಳನ್ನು ಅನ್ವೇಷಿಸಿ, ಜೀವನದ ಪ್ರತಿಯೊಂದು ಅಂಶವು ಹೇಗೆ ಮುಂದಿನ ಹಾದಿಯನ್ನು ತೋರಿಸಬಲ್ಲದು ಹಾಗೂ ,
ನಮ್ಮಲ್ಲಿ ಹುದುಗಿರುವ ಸಾಮರ್ಥ್ಯವನ್ನು ಹೇಗೆ ಹೆಚ್ಚಿಸಬಹುದು ಎಂಬುದನ್ನು ಅರಿಯಿರಿ.
"ಕೆಲವೊಮ್ಮೆ ನಾನು ಚೆನ್ನಾಗೇ ಕೆಲಸ ಮಾಡುತ್ತಿರುತ್ತೇವೆ. ಏನೆಲ್ಲ ಮಾಡಬೇಕೋ ಅವನ್ನು ಅಚ್ಚುಕಟ್ಟಾಗಿ ಮಾಡುತ್ತಿರುತ್ತೇನೆ. ಅಷ್ಟರಲ್ಲಿ ’ಒಳಗಿಂದ’ ಅದೆಂಥದೋ ಧ್ವನಿಗಳು ಮಾತನಾಡುತ್ತವೆ. ’ನಿನ್ನ ಒಳ್ಳೆಯ ಟೈಮ್ ಮುಗಿಯಿತು’ ಎಂಬಂತಹ ಧ್ವನಿಗಳು. ಅಷ್ಟೇ! ನಾನು ನೆಲಕಚ್ಚಲು ಶುರುಮಾಡುತ್ತೇನೆ. ನನ್ನ ’ಪರ್ಫಾರ್ಮೆನ್ಸ್’ ಕಳೆಗುಂದಲು ತೊಡಗುತ್ತದೆ. ಕಾರಣವೇ ಇಲ್ಲದೇ ಬಲಹೀನನಾಗಲು ಶುರುಮಾಡುತ್ತೇನೆ. ಇವು ಯಾವ ಧ್ವನಿಗಳು? ಇವುಗಳನ್ನು ನಿಭಾಯಿಸುವುದು ಹೇಗೆ? ಇವುಗಳಿಗೆಲ್ಲ ತಲೆಕೆಡಿಸಿಕೊಳ್ಳದೆ ನನ್ನ ಬದುಕನ್ನು ನಾನು ಸುಂದರವಾಗಿ ರೂಪಿಸಿಕೊಳ್ಳುವುದು ಹೇಗೆ?"
ಎಂಬುದು ವ್ಯಕ್ತಿಯೊಬ್ಬರ ಪ್ರಶ್ನೆ. ಇದಕ್ಕೆ ಸದ್ಗುರುಗಳ ಅದ್ಭುತ ಉತ್ತರವನ್ನು ಕೇಳಿ.
ಯೋಗಿ, ಅಧ್ಯಾತ್ಮಿಕ ಚಿಂತಕ, ದಾರ್ಶನಿಕ - ಇಂತಹ ವಿಶೇಷಣಗಳಿಂದ ಗುರುತಿಸಲ್ಪಡುವ ಸದ್ಗುರುಗಳು, ಇತರರಿಗಿಂತ ಭಿನ್ನವಾಗಿ ನಿಲುವಂತಹ ಆಧ್ಯಾತ್ಮಿಕ ಗುರು. ಗಹನತೆ ಮತ್ತು ವಾಸ್ತವಿಕತೆಯನ್ನು ಒಳಗೂಡಿರುವ ಅವರ ಜೀವನ ಮತ್ತು ಕಾರ್ಯಗಳು, ಯೋಗವು ಸಮಕಾಲೀನ ವಿಜ್ಞಾನವಾಗಿದ್ದು, ನಮ್ಮ ಕಾಲಕ್ಕೆ ಅತ್ಯಗತ್ಯವಾದುದು ಎಂಬುದರ ಜ್ಞಾಪನೆಯಾಗಿದೆ.
See omnystudio.com/listener for privacy information.
Learn more about your ad choices. Visit megaphone.fm/adchoices