09.23.2023 - By Sadhguru Kannada
ಸದ್ಗುರುಗಳ ಒಂದು ಚೊಕ್ಕ, ಶಕ್ತಿಯುತ ಸಂದೇಶದೊಂದಿಗೆ ನಿಮ್ಮ ದಿನವನ್ನು ಸಂತೋಷದಾಯಕ, ಉತ್ಸಾಹಭರಿತವಾಗಿಸಿ. ಸದ್ಗುರುಗಳೊಂದಿಗೆ ಹಲವಾರು ವಿಷಯಗಳನ್ನು ಅನ್ವೇಷಿಸಿ, ಜೀವನದ ಪ್ರತಿಯೊಂದು ಅಂಶವು ಹೇಗೆ ಮುಂದಿನ ಹಾದಿಯನ್ನು ತೋರಿಸಬಲ್ಲದು ಹಾಗೂ ,
ನಮ್ಮಲ್ಲಿ ಹುದುಗಿರುವ ಸಾಮರ್ಥ್ಯವನ್ನು ಹೇಗೆ ಹೆಚ್ಚಿಸಬಹುದು ಎಂಬುದನ್ನು ಅರಿಯಿರಿ.
‘ಅಂತರ್ಜಾತಿ ವಿವಾಹ’! ಇದು ಇತ್ತೀಚಿನ ದಿನಗಳಲ್ಲಿ ಬಹಳ ಜನರ ಗಮನ ಸೆಳೆಯುತ್ತಿರುವ ವಿಷಯ. ವಧು-ವರರ ಜಾತಿಗಳು ಬೇರೆಯಾಗಿದ್ದಾಗ ಈಗಲೂ ಅವರ ಮದುವೆಗೆ ಅನೇಕ ತೊಡಕುಗಳು ಬರುವುದುಂಟು. ಹಾಗಿದ್ದರೆ ಈ ‘ಅಂತರ್ಜಾತಿ ವಿವಾಹ’ಗಳು ತಪ್ಪೇ? ಮದುವೆಯಲ್ಲಿ ಜಾತಿ ಅಷ್ಟು ಮುಖ್ಯವೇ? ಜಾತಿ ಸಮಾಜದಲ್ಲಿ ಅಷ್ಟು ಪ್ರಮುಖ ಪಾತ್ರವಹಿಸಿರುವುದು ಏಕೆ?
ಇದರ ಬಗ್ಗೆ ಯುವಜನರು ಹಾಗೂ ಹಿರಿಯರು ತಿಳಿಯಬೇಕಾಗಿರುವುದು ಏನು? ಕೇಳಿ, ಸದ್ಗುರುಗಳ ದೃಷ್ಟಿಕೋನವನ್ನು. ಹಾಗೆಯೇ, ಸದ್ಗುರುಗಳು ತಾವು ಮದುವೆಯಾದ ಸನ್ನಿವೇಶವನ್ನೂ ಸ್ವಾರಸ್ಯಕರವಾಗಿ ವಿವರಿಸುತ್ತಾರೆ. ಆನಂದಿಸಿ!
ಯೋಗಿ, ಅಧ್ಯಾತ್ಮಿಕ ಚಿಂತಕ, ದಾರ್ಶನಿಕ - ಇಂತಹ ವಿಶೇಷಣಗಳಿಂದ ಗುರುತಿಸಲ್ಪಡುವ ಸದ್ಗುರುಗಳು, ಇತರರಿಗಿಂತ ಭಿನ್ನವಾಗಿ ನಿಲುವಂತಹ ಆಧ್ಯಾತ್ಮಿಕ ಗುರು. ಗಹನತೆ ಮತ್ತು ವಾಸ್ತವಿಕತೆಯನ್ನು ಒಳಗೂಡಿರುವ ಅವರ ಜೀವನ ಮತ್ತು ಕಾರ್ಯಗಳು, ಯೋಗವು ಸಮಕಾಲೀನ ವಿಜ್ಞಾನವಾಗಿದ್ದು, ನಮ್ಮ ಕಾಲಕ್ಕೆ ಅತ್ಯಗತ್ಯವಾದುದು ಎಂಬುದರ ಜ್ಞಾಪನೆಯಾಗಿದೆ.
See omnystudio.com/listener for privacy information.
Learn more about your ad choices. Visit megaphone.fm/adchoices