
Sign up to save your podcasts
Or


ಕೋವಿಡ್ ಸಾಂಕ್ರಾಮಿಕದ ಕಾರಣಕ್ಕೆ ಲಾಕ್ಡೌನ್ ಆಯ್ತು. ಎಲ್ಲ ಚಟುವಟಿಕೆಗಳು ಒಂದು ಹಂತಕ್ಕೆ ನಿಂತೇ ಹೋದ್ವು ಅನ್ನೋವಷ್ಟರಲ್ಲಿ ದೇಶದ ಎಲ್ಲ ಕ್ಷೇತ್ರಗಳಲ್ಲಿ ಬದಲಾವಣೆ ಆಗ್ತಾನೇ ಹೋಯ್ತು.
ಬದುಕಿನ ಚಟುವಟಿಕೆ ಸೀಮಿತ ಆಗಿರಬಹುದು. ಆದರೆ ಬದುಕು ನಿಲ್ಲುತ್ತದೆಯೇ? ನಮ್ಮ ಜ್ಞಾನ ವಿಕಸನವನ್ನು ಸ್ಥಗಿತಗೊಳಿಸುವುದು ಸಾಧ್ಯವೇ? ಇಂಥ ನಿರ್ಬಂಧದ ಸನ್ನಿವೇಶದಲ್ಲಿ ಜ್ಞಾನಾರ್ಜನೆಗೆ ಬದಲಿ ಮಾರ್ಗಗಳನ್ನು ಹುಡುಕುವುದು ಅಗತ್ಯ ಮತ್ತು ಅನಿವಾರ್ಯತೆ ನಮಗೆ ಬಂತು.
ಇಂತಹ ಬದಲಿ ಮಾರ್ಗಗಳ ಪೈಕಿ ಬಂದದ್ದೇ ಆನ್ಲೈನ್ ಶಿಕ್ಷಣ. ಆನ್ಲೈನ್ ಶಿಕ್ಷಣದ ತಾಂತ್ರಿಕ ಅಂಶಗಳು, ಅದಕ್ಕಾಗುವ ಖರ್ಚು ವೆಚ್ಚ, ಬೇಕಾಗುವ ಉಪಕರಣಗಳು ಇತ್ಯಾದಿ ವಿಚಾರಗಳನ್ನು ಬದಿಗಿಟ್ಟು ಮಾತನಾಡೋಣ. ಪುಟ್ಟ ಮಗುವಿನ ಭಾವ ಲೋಕಕ್ಕೆ ಅಥವಾ ಮನಸ್ಸಿನ ಖಾಲಿ ಜಾಗಕ್ಕೆ ಜ್ಞಾನ ಎಂಬ ಸಸಿಯನ್ನು ಆನ್ಲೈನ್ ಮೂಲಕ ನೀಡುವಲ್ಲಿ ಬೇಕಾದ ಸೂಕ್ಷ್ಮತೆಗಳು ಏನೇನು?
ಮಗುವಿನ ಮಾನಸಿಕ ತಯಾರಿಯಿಂದ ಹಿಡಿದು ಶಿಕ್ಷಕರು ಹೊಸ ವ್ಯವಸ್ಥೆಗೆ ಬದಲಾಗಬೇಕಾದ ರೀತಿ ಹೇಗೆ? ಭಾವನಾತ್ಮಕ ಸಂಬಂಧಗಳನ್ನು ಉಳಿಸಿ ಗುರು ಶಿಷ್ಯ ಬಾಂಧವ್ಯ ಉಳಿಯಬಹುದೇ ಈ ಎಲ್ಲ ವಿಚಾರಗಳ ಬಗ್ಗೆ ಮಾತನಾಡೋಣ ಬನ್ನಿ.
ನಮ್ಮ ಜೊತೆ ಮಧುಸೂದನ ಸುಣ್ಣಂಬಳ ಇದ್ದಾರೆ. ಇವರು ಮನಃಶಾಸ್ತ್ರಜ್ಞ. ಪ್ರಾಧ್ಯಾಪಕ ಮತ್ತು ಹೈದರಾಬಾದ್ನ ಇಂಡಸ್ ಇಂಟರ್ನ್ಯಾಷನಲ್ ಸ್ಕೂಲ್ನ ಆಡಳಿತಾಧಿಕಾರಿ.
ಮಧುಸೂದನ್ ಅವರ ಅನುಭವ ಏನು ಅಂದ್ರೆ, ನಮ್ಮೂರ ಪುಟ್ಟ ಪ್ರಾಥಮಿಕ ಶಾಲೆಯ ವ್ಯವಸ್ಥೆಯಿಂದ ಹಿಡಿದು ಆಧುನಿಕ ಶಿಕ್ಷಣದವರೆಗೆ, ಪದವಿ, ಸ್ನಾತಕೋತ್ತರ ಪದವಿವರೆಗೆ ಪಾಠ ಮಾಡಿದವರು. ಶ್ರೀಲಂಕಾದಲ್ಲಿಯೂ ಕೂಡಾ ಪ್ರಾಧ್ಯಾಪಕರಾಗಿ ಕೆಲಸ ಮಾಡಿದವರು. ಶಿಕ್ಷಣ ಸಂಸ್ಥೆಗಳನ್ನು ನಿರ್ವಹಿಸಿದವರು. ಅವರ ಅನುಭವದ ಮೂಸೆಯಲ್ಲಿ ಆನ್ಲೈನ್ ಶಿಕ್ಷಣ ವರ್ಸಸ್ ಆಫ್ಲೈನ್ ಶಿಕ್ಷಣದ ಬಗ್ಗೆ ಕೇಳೋಣ.
ಪ್ರಸಾರ ಆಗಸ್ಟ್ 15, 2020
By Shwetha Initiativeಕೋವಿಡ್ ಸಾಂಕ್ರಾಮಿಕದ ಕಾರಣಕ್ಕೆ ಲಾಕ್ಡೌನ್ ಆಯ್ತು. ಎಲ್ಲ ಚಟುವಟಿಕೆಗಳು ಒಂದು ಹಂತಕ್ಕೆ ನಿಂತೇ ಹೋದ್ವು ಅನ್ನೋವಷ್ಟರಲ್ಲಿ ದೇಶದ ಎಲ್ಲ ಕ್ಷೇತ್ರಗಳಲ್ಲಿ ಬದಲಾವಣೆ ಆಗ್ತಾನೇ ಹೋಯ್ತು.
ಬದುಕಿನ ಚಟುವಟಿಕೆ ಸೀಮಿತ ಆಗಿರಬಹುದು. ಆದರೆ ಬದುಕು ನಿಲ್ಲುತ್ತದೆಯೇ? ನಮ್ಮ ಜ್ಞಾನ ವಿಕಸನವನ್ನು ಸ್ಥಗಿತಗೊಳಿಸುವುದು ಸಾಧ್ಯವೇ? ಇಂಥ ನಿರ್ಬಂಧದ ಸನ್ನಿವೇಶದಲ್ಲಿ ಜ್ಞಾನಾರ್ಜನೆಗೆ ಬದಲಿ ಮಾರ್ಗಗಳನ್ನು ಹುಡುಕುವುದು ಅಗತ್ಯ ಮತ್ತು ಅನಿವಾರ್ಯತೆ ನಮಗೆ ಬಂತು.
ಇಂತಹ ಬದಲಿ ಮಾರ್ಗಗಳ ಪೈಕಿ ಬಂದದ್ದೇ ಆನ್ಲೈನ್ ಶಿಕ್ಷಣ. ಆನ್ಲೈನ್ ಶಿಕ್ಷಣದ ತಾಂತ್ರಿಕ ಅಂಶಗಳು, ಅದಕ್ಕಾಗುವ ಖರ್ಚು ವೆಚ್ಚ, ಬೇಕಾಗುವ ಉಪಕರಣಗಳು ಇತ್ಯಾದಿ ವಿಚಾರಗಳನ್ನು ಬದಿಗಿಟ್ಟು ಮಾತನಾಡೋಣ. ಪುಟ್ಟ ಮಗುವಿನ ಭಾವ ಲೋಕಕ್ಕೆ ಅಥವಾ ಮನಸ್ಸಿನ ಖಾಲಿ ಜಾಗಕ್ಕೆ ಜ್ಞಾನ ಎಂಬ ಸಸಿಯನ್ನು ಆನ್ಲೈನ್ ಮೂಲಕ ನೀಡುವಲ್ಲಿ ಬೇಕಾದ ಸೂಕ್ಷ್ಮತೆಗಳು ಏನೇನು?
ಮಗುವಿನ ಮಾನಸಿಕ ತಯಾರಿಯಿಂದ ಹಿಡಿದು ಶಿಕ್ಷಕರು ಹೊಸ ವ್ಯವಸ್ಥೆಗೆ ಬದಲಾಗಬೇಕಾದ ರೀತಿ ಹೇಗೆ? ಭಾವನಾತ್ಮಕ ಸಂಬಂಧಗಳನ್ನು ಉಳಿಸಿ ಗುರು ಶಿಷ್ಯ ಬಾಂಧವ್ಯ ಉಳಿಯಬಹುದೇ ಈ ಎಲ್ಲ ವಿಚಾರಗಳ ಬಗ್ಗೆ ಮಾತನಾಡೋಣ ಬನ್ನಿ.
ನಮ್ಮ ಜೊತೆ ಮಧುಸೂದನ ಸುಣ್ಣಂಬಳ ಇದ್ದಾರೆ. ಇವರು ಮನಃಶಾಸ್ತ್ರಜ್ಞ. ಪ್ರಾಧ್ಯಾಪಕ ಮತ್ತು ಹೈದರಾಬಾದ್ನ ಇಂಡಸ್ ಇಂಟರ್ನ್ಯಾಷನಲ್ ಸ್ಕೂಲ್ನ ಆಡಳಿತಾಧಿಕಾರಿ.
ಮಧುಸೂದನ್ ಅವರ ಅನುಭವ ಏನು ಅಂದ್ರೆ, ನಮ್ಮೂರ ಪುಟ್ಟ ಪ್ರಾಥಮಿಕ ಶಾಲೆಯ ವ್ಯವಸ್ಥೆಯಿಂದ ಹಿಡಿದು ಆಧುನಿಕ ಶಿಕ್ಷಣದವರೆಗೆ, ಪದವಿ, ಸ್ನಾತಕೋತ್ತರ ಪದವಿವರೆಗೆ ಪಾಠ ಮಾಡಿದವರು. ಶ್ರೀಲಂಕಾದಲ್ಲಿಯೂ ಕೂಡಾ ಪ್ರಾಧ್ಯಾಪಕರಾಗಿ ಕೆಲಸ ಮಾಡಿದವರು. ಶಿಕ್ಷಣ ಸಂಸ್ಥೆಗಳನ್ನು ನಿರ್ವಹಿಸಿದವರು. ಅವರ ಅನುಭವದ ಮೂಸೆಯಲ್ಲಿ ಆನ್ಲೈನ್ ಶಿಕ್ಷಣ ವರ್ಸಸ್ ಆಫ್ಲೈನ್ ಶಿಕ್ಷಣದ ಬಗ್ಗೆ ಕೇಳೋಣ.
ಪ್ರಸಾರ ಆಗಸ್ಟ್ 15, 2020