ಕಥೆ ಖಜಾನೆ - ಕನ್ನಡ

ಬೆದರು ಬೊಂಬೆಗಳ ಮೆರವಣಿಗೆ


Listen Later

ಲೇಖಕರು : ಸ್ಟೋರಿವೀವರ್ರಿಗಾಗಿ ಶಾಮಿಮ್ ಪದಮ್ಸೀ
ನಿರೂಪಕರು : ರೇಷ್ಮಾ
ಸಂಪಾದಕರು : ನೂರ್ ಫಾತಿಮಾ

ಹೊಲಗಳಲ್ಲಿ ತೆನೆ ಕಾಳುಗಳನ್ನು ತಿನ್ನಲು ಬರುವ ಪಕ್ಷಿಗಳು ಬೆದರಿ ಓಡಿ ಹೋಗುವಂತೆ ಮಾಡಲು ಬೆದರುಬೊಂಬೆಗಳನ್ನು ಕಟ್ಟಿರುತ್ತಾರೆ. ಆದರೆ ಪುಟ್ಟ ಗೌರಿ ಯೋಚಿಸುವುದೇ ಬೇರೆ! ಅದೇನೆಂದು ಓದಿ ತಿಳಿಯಿರಿ.

ಈ ಕಥೆಯ ಮೂಲಕ ಮಕ್ಕಳೊಂದಿಗೆ ಕನಸುಗಳ ಕುರಿತಾಗಿ ಚರ್ಚಿಸಬಹುದು. ಮನೆಯಲ್ಲಿ ಹಿರಿಯರಿಗೆ ಮಕ್ಕಳು ಮಾಡುವ ಸಹಾಯಗಳ ಕುರಿತು ಚರ್ಚಿಸಬಹುದು. ಮಕ್ಕಳೊಂದಿಗೆ ಸಂತೋಷ, ದುಖಃ, ಭಯ ಮುಂತಾದ ಭಾವನೆಗಳ ಬಗ್ಗೆ ಚರ್ಚಿಸಬಹುದು. ಕಥೆಗೆ ಸಂಬಂಧಿಸಿದಂತೆ ಕೆಲವು ತರಗತಿಯ ಚಟುವಟಿಕೆಗಳು:

  1. ಮಕ್ಕಳಿಗೆ ಕಥೆಯನ್ನು ಕೇಳಿಸುವ ಮೊದಲು ಮಕ್ಕಳು ಎಂತೆಂತಹ ಕನಸುಗಳನ್ನು ಕಂಡಿರುವರೆಂದು ಚರ್ಚಿಸುವುದು.
  2. ಮನೆಗೆಲಸದಲ್ಲಿ ಪೋಷಕರಿಗೆ ಹೇಗೆಲ್ಲಾ ನೆರವಾಗುವಿರೀ? ಎಂದು ಪ್ರಶ್ನಿಸುವುದು.
  3. ಹೊಲದ ಬೆಳೆ ತಿನ್ನಲು ಬರುವ ಪಕ್ಷಿಗಳನ್ನು ಓಡಿಸುವುದಕ್ಕೆ ನೀವು ನೀಡುವ ಸಲಹೆಗಳೇನು?
  4. ನೀವು ಹಗಲಿನಲ್ಲಿ ಯಾರೊಂದಿಗಾದರೂ ಮಾತನಾಡಿದ ವಿಚಾರದ ಕುರಿತಾಗಿಯೇ ಕನಸನ್ನು ಕಂಡಿರುವಿರಾ?
  5. ಬೆದರು ಬೊಂಬೆಗಳು ವಿಚಿತ್ರವಾಗಿ ಕಾಣುವಂತೆ ತಯಾರಿಸಲು ಕಾರಣವೇನು? ಹಾಗೂ ಅದರಿಂದ ಆಗಬಹುದಾದ ಪರಿಣಾಮಗಳೇನು ? 
  6. ನಿಮಗೆ ಎಂದಾದರೂ ಭಯವುಂಟುಮಾಡುವಂತಹ ಕನಸು ಬಿದ್ದಿದೆಯೇ? ಅರದ ಅನುಭವಗಳನ್ನು ಹಂಚಿಕೊಳ್ಳಿ.
     

ಇವರಿಗೆ ಸೂಕ್ತ: ಹಿರಿಯ ಪ್ರಾಥಮಿಕ ಹಂತ
ಕಥಾವಸ್ತು: ಕುಟುಂಬ,ಭಾವನೆಗಳು,ಸಹಾಯ - ಸಹಕಾರ
ಗುರುತು ಪಟ್ಟಿ: ತರಗತಿ ೪,ತರಗತಿ ೫,ತರಗತಿ ೬,ತರಗತಿ ೭
ಕಥೆಯ ಚಟುವಟಿಕೆ ಪುಟಕ್ಕೆ ಇಲ್ಲಿ ಕ್ಲಿಕ್ಕಿಸಿ
...more
View all episodesView all episodes
Download on the App Store

ಕಥೆ ಖಜಾನೆ - ಕನ್ನಡBy Kathe Khajane Team, IT for Change