"ಬೆಂಗಳೂರ ಪರಂಪರೆಯ ಮುಖ್ಯ ಭಾಗ
ಇಲ್ಲಿ ನಡೆಯುವ ಪುರಾತನ ಕರಗ
ಒಮ್ಮೆಯಾದರೂ ಕಣ್ಣಿಂದ ನೋಡ
ಇದರ ವೈಭವ ಕಂಡು ಕೊಂಡಾಡ
ಯಾತಕ್ಕವ್ವ ಹುಬ್ಬಳ್ಳಿ ಧಾರವಾಡ
ನಮ್ಮ ಬೆಂಗಳೂರ್ ಊರ ನಮಗ ಪಾಡ"
ಎಂದು ಹಾಡುತ್ತ ನಾವು ನಿಮ್ಮನ್ನು "ಬೆಂಗಳೂರು ಕರಗ"ಕ್ಕೆ ಕರೆದುಕೊಂಡು ಹೊರಟಿದ್ದೇವೆ.
👉 ದವನದ ಹುಣ್ಣಿಮೆಗಿಂತ ೯ ದಿನ ಮೊದಲು ಧ್ವಜಾರೋಹಣದಿಂದ ಕರಗದ ಹಬ್ಬ ಶುರುವಾಗಿ, ಹುಣ್ಣಿಮೆ ದಿನ ಹೂವಿನ ಕರಗವಾಗಿ, ಅದಾದಮೇಲೆ ಎರಡನೆ ದಿನ ರಥೋತ್ಸವದವರೆಗೆ ಒಟ್ಟು ಹನ್ನೊಂದು ದಿನ ನಡೆಯುತ್ತದೆ.
👉 ಭಾವೈಕ್ಯದ ಸಂಕೇತವೆಂಬಂತೆ ಕರಗದ ಮೆರವಣಿಗೆ ಮಸ್ತಾನ್ ಸಾಬ್ ದರ್ಗಾಕ್ಕೆ ತೆರಳಿ, ಅಲ್ಲಿ ಧೂಪಾರತಿ ಸ್ವೀಕರಿಸಿ ನಂತರ ನಗರದ ಪ್ರದಕ್ಷಿಣೆ ಹೊರಡುತ್ತದೆ.
👉 ತಲೆಯ ಮೇಲೆ ಹೊರುವ ಹೂವಿನ ಕರಗ , ದ್ರೌಪದಿ ದುಶ್ಯಾಸನನ ಕರುಳದಂಡೆಯನ್ನು ಮುಡಿದ ಸಂದರ್ಭದ ಸಂಕೇತ ಅಂತೆ.
👉 ಭೀಮನನ್ನು ಸೆರೆ ಹಿಡಿದು ಹಾಕಿದ್ದ ಪೋತರಾಜನು ಕೊನೆಗೆ ಪಾಂಡವರ ತಂಗಿ ಶಂಕೋದರಿಯನ್ನು ಮದುವೆಯಾದ ಕತೆ ನಿಮಗೆ ಗೊತ್ತೇ?
ಈ ಎಲ್ಲಾ ವಿಷಯಗಳನ್ನು ನಮ್ಮ #ದನಿಪಯಣ ದ ಈ ಸಂಚಿಕೆಯಲ್ಲಿ ಕೇಳಿ.
ಈ ಸಂಚಿಕೆಯಲ್ಲಿ ನಾವು ಉಪಯೋಗಿಸಿದ ಹಾದಿ, ಕಂಡ ದೃಶ್ಯಗಳ ಚಿತ್ರಗಳು ಈ ಬ್ಲಾಗಿನಲ್ಲಿವೆ :
http://antarangada-mrudanga.blogspot.com/2020/04/blog-post_20.html?m=1