ಲಾಕ್ಡೌನ್ ನಡುವೆ ದೂರ ಪಯಣ ಹೋಗದೆ ನಾವು ನಮ್ಮ ಬೆಂಗಳೂರಿನ ಕುಮಾರಸ್ವಾಮಿ ಬಡಾವಣೆಯ ಇತಿಹಾಸವನ್ನು ಈ ಸಲದ #ದನಿಪಯಣ ಸಂಚಿಕೆಯಲ್ಲಿ ತಿಳಿಯಲಿದ್ದೇವೆ.
👉 ಈ ಬಡಾವಣೆಗೆ ಹೆಸರು ಬರಲು ಇಲ್ಲಿರುವ ಉದ್ಭವ ಕುಮಾರಸ್ವಾಮಿ ದೇವಸ್ಥಾನ ಕಾರಣ.
👉 ಕ್ರಿಶ ೧೮೦೫ರಲ್ಲಿ ಸ್ಥಾಪನೆಯಾಗಿರುವ ಖಾನೆ ಮುನೇಶ್ವರ ಗುಡಿಯಲ್ಲಿ ನವ-ಶಿಲಾಯುಗದ್ದವೆಂದು ಹೇಳಲಾಗುವ ಕಲ್ಲಿನ ಕೊಡಲಿಗಳಿವೆ.
👉 ಇಲ್ಲಿನ ಯಲ್ಲಮ್ಮನ ಗುಡಿಯಲ್ಲಿ ಸುಮಾರು ೬೦೦ ವರ್ಷಗಳ ಹಳೆಯ ಶಿಲಾಶಾಸನವಿದೆ. ಈಗಿನ ಯಲಚೇನಹಳ್ಳಿಯನ್ನು ಅದರಲ್ಲಿ 'ಎಳೆಜಿಯನಹಹಳ್ಳಿ' ಎಂದು ಉಲ್ಲೇಖಿಸಲಾಗಿದೆ.
👉 ಸಾರಕ್ಕಿಯ ಸಾರಂಗಧರನ ಕತೆ ಗೊತ್ತಾ ?
ಕತೆಯ ಪ್ರಕಾರ ಅವನು ಇವತ್ತಿನ ಸಾರಕ್ಕಿಯ ರಾಜಕುಮಾರ. ಅವನು ಪ್ರೀತಿಸಿದವಳನ್ನು ಅವರಪ್ಪ ಮದುವೆಯಾಗಿ ಸಾರಂಗಧರನನ್ನು ಗಡಿಪಾರು ಮಾಡುತ್ತಾನೆ. ರಾಜ್ಯದ ಮೇಲೆ ವೈರಿ ದಾಳಿ ಮಾಡಿದಾಗ ಸಾರಂಗಧರ ಮರಳಿ ಬಂದು ಯುದ್ಧ ಗೆದ್ದು ಕೊಡುತ್ತಾನೆ. ಆದರೂ ಚಿಕ್ಕಮ್ಮನ ಚಾಡಿಯಿಂದಾಗಿ ಅವರಪ್ಪ ಅವನಿಗೆ ಮರಣದಂಡನೆ ವಿಧಿಸುತ್ತಾನೆ.
ಕತೆಯ ಪ್ರಕಾರ ಅವನ ಮರಣದಂಡನೆ ಇಂದು ದಯಾನಂದ ಸಾಗರ ಕಾಲೇಜಿರುವ ಶಾವಿಗೆ ಮಲ್ಲೇಶ್ವರ ಬೆಟ್ಟದಲ್ಲಿಯೇ ಆಗಿತ್ತು.
ಈ ಎಲ್ಲಾ ವಿಷಯಗಳನ್ನು ನಮ್ಮ #ದನಿಪಯಣ ದ ಈ ಸಂಚಿಕೆಯಲ್ಲಿ ಕೇಳಿ.
ಈ ಸಂಚಿಕೆಯಲ್ಲಿ ನಾವು ಉಪಯೋಗಿಸಿದ ಹಾದಿ, ಕಂಡ ದೃಶ್ಯಗಳ ಚಿತ್ರಗಳು ಈ ಬ್ಲಾಗಿನಲ್ಲಿವೆ :
http://antarangada-mrudanga.blogspot.com/2020/05/blog-post.html