👉 "ಒಂದು ಬದಿ ಸಹ್ಯಾದ್ರಿ, ಒಂದು ಬದಿ ಕಡಲು, ನಡು ಮಧ್ಯದಲಿ ಅಡಕೆ ತೆಂಗುಗಳ ಮಡಿಲು, ಸಿರಿಗನ್ನಡದ ಚಪ್ಪರವೆ ನನ್ನ ಜಿಲ್ಲೆ, ಇಲ್ಲಿಯೇ ಇನ್ನೊಮ್ಮೆ ಹುಟ್ಟುವೆನು ನಲ್ಲೆ" ಎಂದು ಉತ್ತರ ಕನ್ನಡ ಜಿಲ್ಲೆಯ ಬಗ್ಗೆ ಬರೆದ ಚುಟುಕು ಬ್ರಹ್ಮ ದಿನಕರ ದೇಸಾಯಿ ಅವರು ಇಲ್ಲಿನ ಸಂಸದರಾಗಿ ಚುನಾಯಿತರಾಗಿದ್ದರು, ಗೊತ್ತಾ ?
👉 ಕರ್ನಾಟಕದಲ್ಲಿ ಉಪ್ಪಿನ ಸತ್ಯಾಗ್ರಹ ಶುರುವಾದದ್ದು ಎಲ್ಲಿ ಗೊತ್ತಾ?
👉 ಬ್ರಿಟಿಷರು ಬಾಲಕ್ಕೆ ಎರಡು ಆಣೆಯಂತೆ ಪ್ರತಿ ದನಕ್ಕೂ ಕರವಿಧಿಸಿದ್ದರು, ಗೊತ್ತಾ?
👉 ಶಿರಸಿಯ ಶ್ರೀ ಮಾರಿಕಾಂಬಾ ಗುಡಿಯಲ್ಲಿ ಚಳವಳಿಗಾರರ ಸಭೆ ನಡೆದಿದ್ದವು, ಗೊತ್ತಾ?
👉 ಲಿಲಾವಿನಲ್ಲಿ ಜಪ್ತಿ ಮಾಡಿದ ಎಮ್ಮೆ ಕೊಂಡವರ ಮನೆಮುಂದೆ ಸತ್ಯಾಗ್ರಹ ಮಾಡಿದ ಮಹಿಳೆಯರು ಮನೆಯವರ ಹೃದಯ ಪರಿವರ್ತನೆ ಮಾಡಿ ಎಮ್ಮೆಯನ್ನು ಮೆರವಣಿಗೆಯಲ್ಲಿ ವಾಪಸು ತೆಗೆದುಕೊಂಡು ಹೋದದ್ದು ಗೊತ್ತಾ?
ಇಂತಹ ಇನ್ನೂ ಆಸಕ್ತಿಕರ ಮಾಹಿತಿಗಾಗಿ ನಮ್ಮ ಈ ಸಲದ ದನಿಪಯಣ ಕೇಳಿ.