ದನಿಪಯಣ

ದನಿಪಯಣ-ಪ್ಲೇಗಮ್ಮನ ಪುರಾಣ


Listen Later

ಈಗ ಕರೋನಾ ಹೆಮ್ಮಾರಿಯ ಆರ್ಭಟದ ನಡುವೆ ಒಂದೂ ಕಾಲು ಶತಮಾನದ ಹಿಂದೆ ಪ್ಲೇಗಮ್ಮ ಕರ್ನಾಟಕದಲ್ಲಿ ನಡೆಸಿದ ಮಾರಣಹೋಮದ ದುಃಸ್ವಪ್ನವನ್ನು ನೆನೆಸಿಕೊಂಡು, ಅದರಿಂದ ನಾವೇನು ಕಲಿಯಬಹುದು ಎಂದು #ದನಿಪಯಣ ಈ ಸಂಚಿಕೆಯಲ್ಲಿ ನೋಡೋಣ ಬನ್ನಿ.
👉 ಇಂದಿನ ಕೊರಣ್ಣನದೂ ಅಂದಿನ ಪ್ಲೇಗಮ್ಮನದು ಒಂದೇ ತವರು - ಚೀನಾ 🇨🇳 !
👉 ಮುಂಬೈಗೆ ಮೊದಲು ಬಂದಿದ್ದ ಸೋಂಕು, ಕಾಗವಾಡದಲ್ಲಿ ಕರ್ನಾಟಕದ ಮೊದಲ ಬಲಿ ಪಡೆದಿತ್ತು. ನಂತರ ಬೆಳಗಾವಿ, ಧಾರವಾಡ ಜಿಲ್ಲೆಗಳಲ್ಲಿ ಮರಣಮೃದಂಗ ಬಾರಿಸಿತ್ತು.
👉 ಆ ಪ್ಲೇಗಿನಲ್ಲಿ ಧಾರವಾಡ ಜಿಲ್ಲೆಯಲ್ಲಿ ಸುಮಾರು ೪೦ಸಾವಿರ ಸಾವುಗಳಾದರೆ, ಬೆಂಗಳೂರಿನಲ್ಲಿ ಸತ್ತವರು-ಊರು ಬಿಟ್ಟವರಿಂದಾಗಿ ಜನಸಂಖ್ಯೆ ಹೆಚ್ಚೂಕಡಿಮೆ ಅರ್ಧದಷ್ಟಾಗಿತ್ತು.
👉 ಈಗ ಕೊರೋನಾ-ನಿಯಂತ್ರಣಕ್ಕೆ ಕೆಲ ಜನ ವಿರೋಧಿಸುರುವಂತೆ, ಆವಾಗ ಪ್ಲೇಗು-ನಿಯಂತ್ರಣಕ್ಕೂ ಕೆಲ ಜನ ವಿರೋಧಿಸಿದ್ದರು. ಗಂಜಾಂನಲ್ಲಿ ದಂಗೆಯೇ ಆಗಿ, ಪೋಲೀಸ್ ಕಾರ್ಯಾಚರಣೆಯಲ್ಲಿ ಹಲವರ ಜೀವಹಾನಿಯಾಗಿತ್ತು.
👉 ಬೆಂಗಳೂರಿನ ಬಸವನಗುಡಿ-ಮಲ್ಲೇಶ್ವರ, ಧಾರವಾಡದ ಮಾಳಮಡ್ಡಿ ಮೂರೂ ಸಮವಯಸ್ಕ ಬಡಾವಣೆಗಳು. ಮೂರರ ಅಭಿವೃದ್ಧಿಯೂ ಪ್ಲೇಗಿನ ನಂತರ ಸರ್ಕಾರಗಳಿಂದ ಗಾಳಿ-ಬೆಳಕು ಚನ್ನಾಗಿರುವ ವಸತಿ ಬಡಾವಣೆ ನಿರ್ಮಾಣ ಮಾಡುವ ಉದ್ದೇಶದಿಂದ ಆಗಿತ್ತು.
👉 ನಿಮಗೆ ಗೊತ್ತಾ ? ಬೆಂಗಳೂರಿನ ಹೋಟಲುದ್ಯಮದ ಅರುಣೋದಯ, ಟೆಲಿಫೋನ್ ಜಾಲ ವಿಸ್ತರಣೆಗೆ ಪ್ಲೇಗೇ ಕಾರಣವಾಗಿತ್ತು !
ಈ ಎಲ್ಲಾ ವಿಷಯಗಳನ್ನು ನಮ್ಮ #ದನಿಪಯಣ ದ ಈ ಸಂಚಿಕೆಯಲ್ಲಿ ಕೇಳಿ.
ನಿಮಗೆ ಗೊತ್ತಿರೊ ಹಾಗೆ : *ದನಿಪಯಣ* ಪಾಡ್‌ಕಾಸ್ಟ್‌ ಕಾರ್ಯಕ್ರಮದ ಉದ್ದೇಶ ಶಾಲೆಯಲ್ಲಿ ಕಲಿಸದ, ಪಠ್ಯ ಪುಸ್ತಕಗಳಲ್ಲಿ ಇರದ ನಮ್ಮ ಊರು-ನಾಡುಗಳ ಕತೆ-ಇತಿಹಾಸ ತಿಳಿದುಕೊಳ್ಳೋದು ಮತ್ತು ಮಕ್ಕಳಿಗೆ ತಿಳಿಸುವುದು.
ಈ ಪಾಡ್‌ಕಾಸ್ಟ್‌ ಸಂಚಿಕೆಗಳು ರೇಡಿಯೋ-ಗಿರ್ಮಿಟ್ನಲ್ಲಿ (radiogirmit.com) ವಾರ-ಬಿಟ್ಟು-ವಾರ ಗುರುವಾರ ಪ್ರಸಾರ ಆಗುತ್ತವೆ.
ದನಿಪಯಣ ದ ಹಿಂದಿನ ಸಂಚಿಕೆಗಳು ಗೂಗಲ್‌ಪಾಡ್‌ಕಾಸ್ಟ್ ನಲ್ಲಿ ಲಭ್ಯವಿವೆ: https://www.google.com/podcasts?feed=aHR0cHM6Ly9hbmNob3IuZm0vcy8xMTAwMTAyMC9wb2RjYXN0L3Jzcw==
ನಮ್ಮ ದನಿಪಯಣದ ಸಂಚಿಕೆಗಳನ್ನು ಇತರ ಆಸಕ್ತರಿಗೆ ಫಾರ್ವರ್ಡ್ ಮಾಡಿ.
ನಿಮಗೆ ಕೇಳಲು ಆಸಕ್ತಿ ಇಲ್ಲವಾದರೆ, ದಯವಿಟ್ಟು ತಿಳಿಸಿ. ಮುಂದಿನ ಸಂಚಿಕೆಯಿಂದ ತೊಂದರೆ ಕೊಡೋದಿಲ್ಲ🙏
ಅನಿಮಿಷ ಮತ್ತು ಗುರುರಾಜ ಕುಲಕರ್ಣಿ
.
...more
View all episodesView all episodes
Download on the App Store

ದನಿಪಯಣBy Gururaj Kulkarni

  • 5
  • 5
  • 5
  • 5
  • 5

5

1 ratings