ದನಿಪಯಣ

ದನಿಪಯಣದಲ್ಲಿ ಗಾನಯೋಗಿಗಳು


Listen Later

ಗದುಗಿನ ಬಗ್ಗೆ ನಾವು ಎರಡು #ದನಿಪಯಣ ಸಂಚಿಕೆಗಳನ್ನು ಮಾಡಿದ್ದೀವಿ.
೧. https://t.co/7ScRqNZFxs
೨. https://t.co/lSdNo8Xhg4
ಆದರೆ "ಇನ್ನೂ ಸಂಗೀತಸಂತ ಪುಟ್ಟಯ್ಯಜ್ಜನ ಬಗ್ಗೆ ಯಾಕೆ ಮಾತಾಡಿಲ್ಲ?" ಎಂದು ನೀವು ಕೇಳತಾ ಇದ್ದರೆ , ತಗೋಳ್ಳಿ ನಮ್ಮ ಈ ಸಂಚಿಕೆಯಲ್ಲಿ ವೀರೇಶ್ವರ ಪುಣ್ಯಾಶ್ರಮಕ್ಕೆ ನಮ್ಮ #ದನಿಪಯಣ.
👉 ವೀರೇಶ್ವರ ಪುಣ್ಯಾಶ್ರಮಕ್ಕೆ ಆ ಹೆಸರು ಬರಲು ಏನು ಕಾರಣ ನಿಮಗೆ ಗೊತ್ತಾ ? ನಾಲ್ವತ್ತವಾಡದ ಶ್ರೀ ವೀರೇಶ್ವರ ಶರಣರ ಹೆಸರಿನಿಂದಾಗಿ ಆ ಹೆಸರು ಬಂತಾ ?
ಪುಣ್ಯಾಶ್ರಮದ ಸ್ಥಾಪನೆಗೆ ಪ್ರೇರಕಶಕ್ತಿಯಾಗಿದ್ದ "ಕರ್ನಾಟಕದ ಫೋರ್ಡ್" ಶ್ರೀ ಬಸರಿಗಿಡದ ವೀರಪ್ಪನವರ ಹೆಸರಿನಿಂದಾಗಿ ಬಂತಾ ?
👉 ಬರಬೇಕಿತ್ತು ಭಾರತ ರತ್ನ
ಪ್ರಶಸ್ತಿ ಪುಟ್ಟರಾಜರಿಗೆಂದೋ
ಬಂದಿಲ್ಲ, ಏಕೆಂದರೆ
ಕಣ್ಣಿಲ್ಲದ ಕವಿ ಬರೆದ ಕೃತಿ
ಕಣ್ಣಿದ್ದವರಿನ್ನೂ ಓದಿಲ್ಲ !!
(ಕವಿ ಶ್ರೀ ಐ.ಕೆ.ಕಮ್ಮಾರ ಅವರ ಕವಿತೆ)
👉 ಗವಾಯಿಗಳ ಕಂಪನಿಯ "ಹೇಮರಡ್ಡಿ ಮಲ್ಲಮ್ಮ" ನಾಟಕ ಸುಮಾರು ನಾಲ್ಕು ನೂರು ಪ್ರಯೋಗ ಕಂಡಿತ್ತು !
👉 ಸರ್ವಶ್ರೀ ಅರ್ಜುನಸಾ ನಾಕೋಡ, ಬಸವರಾಜ ರಾಜಗುರು, ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿ ಇತ್ಯಾದಿ ದಿಗ್ಗಜರು ಗವಾಯಿಗಳ ಕಂಪನಿಯಲ್ಲಿಯೇ ಪಳಗಿದವರು.
👉 "ರಕ್ಷಿಸು ಕರ್ನಾಟಕ ದೇವಿ" ಎಂಬ ಜನಪ್ರಿಯ ನಾಡಗೀತೆ ಕರ್ತೃ ಶಾಂತಕವಿಗಳು 'ಕೃತಪುರ ನಾಟಕ ಮಂಡಳಿ'ಯ ಮೂಲಕ ಆಧುನಿಕ ಕನ್ನಡ ನಾಟಕರಂಗಕ್ಕೆ ಗದುಗಿನಲ್ಲಿ ನಾಂದಿ ಹಾಡಿದ್ದರು.
ಈ ಎಲ್ಲಾ ವಿಷಯಗಳನ್ನು ನಮ್ಮ #ದನಿಪಯಣ ದ ಈ ಸಂಚಿಕೆಯಲ್ಲಿ ಕೇಳಿ.
ಈ ಸಂಚಿಕೆಯಲ್ಲಿ ನಾವು ಉಪಯೋಗಿಸಿದ ಹಾದಿ, ಕಂಡ ದೃಶ್ಯಗಳ ಚಿತ್ರಗಳು ಈ ಬ್ಲಾಗಿನಲ್ಲಿವೆ : http://antarangada-mrudanga.blogspot.com/2020/03/blog-post_21.html
...more
View all episodesView all episodes
Download on the App Store

ದನಿಪಯಣBy Gururaj Kulkarni

  • 5
  • 5
  • 5
  • 5
  • 5

5

1 ratings