ಕಥೆ ಖಜಾನೆ - ಕನ್ನಡ

ಗುಬ್ಬಿ ಮತ್ತು ಹಣ್ಣು


Listen Later

ಲೇಖಕರು : ಸ್ಟೋರಿವೀವರ್ರಿಗಾಗಿ ವೆಂಕಟರಮಣ ಗೌಡ
ನಿರೂಪಕರು : ಬಸವರಾಜು ಟಿ.ಡಿ
ಸಂಪಾದಕರು : ಸಿದ್ದರಾಮೇಶ್ವರ

ಮುಳ್ಳುಹಿಂಡಿನಲ್ಲಿ ಬಿದ್ದ ಹಣ್ಣು ಎತ್ತಿಕೊಳ್ಳಲು ಏನೇನೋ ಸಾಹಸ ಮಾಡಿದ ಗುಬ್ಬಿಗೆ ಕೊನೆಯಲ್ಲಿ ಏನಾಯಿತು? “ಗುಬ್ಬಿ ಮತ್ತು ಹಣ್ಣು” ಪ್ರಕೃತಿ ನ್ಯಾಯದ ನಿಯಮ ಬಿಚ್ಚಿಡುವ ಕಥೆ.

ಈ ಕಥೆಯ ಮೂಲಕ ಮಕ್ಕಳಿಗೆ ವಾಕ್ಯಗಳನ್ನು ಸಂಯೋಜಿಸಿ ಕಥೆಯನ್ನು ರಚಿಸುವ ಕೌಶಲ್ಯವನ್ನು ತಿಳಿಸಿಕೊಡಬಹುದು. ಇಟ್ಟ ಗುರಿಯನ್ನು ಮೆಟ್ಟಿ ನಿಲ್ಲುವವರೆಗೂ ನಿಲ್ಲಬಾರದೆಂಬ ನೀತಿಯನ್ನ ಹಾಗೂ ನಮ್ಮ ಕಾರ್ಯಕ್ಕಾಗಿ ಇನ್ನೊಬ್ಬರನ್ನ ಬಲವಂತವಾಗಿ ಬಳಸಿಕೊಳ್ಳಬಾರದೆಂಬ ನೀತಿಯನ್ನ ಮಕ್ಕಳಿಗೆ ಮನದಟ್ಟು ಮಾಡಿಕೊಡುವುದು. ಕಥೆಗೆ ಸಂಬಂಧಿಸಿದಂತೆ ಕೆಲವು ತರಗತಿಯ ಚಟುವಟಿಕೆಗಳು :

  1. ವಿವಿಧ ವೃತ್ತಿಗಳ ಕುರಿತಾಗಿ ಚರ್ಚಿಸಬಹುದು.
  2. ವಿವಿಧ ಪ್ರಾಣಿಗಳು ಹಾಗೂ ಅವುಗಳ ಆಹಾರ ಚಕ್ರದ ಕುರಿತಾಗಿಯೂ ಚರ್ಚಿಸಬಹುದು.
  3. ಒಂದು ವೇಳೆ ನೀನು ಗಬ್ಬಿಯ ಸ್ನೇಹಿತನಾಗಿದ್ದರೆ ಅದರ ಹಣ್ಣನ್ನು ಹಿಂದಿರುಗಿಸಿದ ನಂತರ ಗುಬ್ಬಿಗೆ ಏನು ಸಲಹೆ ನೀಡುತ್ತಿದ್ದೆ.
  4. ಗಬ್ಬಿಯು ತನಗೆ ಸಹಾಯ ಮಾಡದವರಿಗೆ ಕೇಡು ಬಯಸಿದ ಕುರಿತು ನಿಮ್ಮ ಅಭಿಪ್ರಾಯವೇನು?
  5. ಗುಬ್ಬಿ ಸಹಾಯ ಕೇಳಿದವರಲ್ಲಿ ನೀವು ಕೂಡ ಒಬ್ಬರಾಗಿದ್ದರೆ ನೀವು ಏನು ಮಾಡುತ್ತಿದ್ದಿರಿ ಹಾಗೂ ಆಗ ನಿಮಗೆ ಹೇಗನಿಸುತ್ತಿತ್ತು?
  6. ಗುಬ್ಬಿಯು ತನಗೆ ಸಹಾಯ ಮಾಡುವಂತೆ ಬೇರೆಯವರನ್ನು ಕೇಳುತ್ತಿದ್ದ ರೀತಿ ಹೇಗಿತ್ತು ಹಾಗೂ ಅದರ ಕುರಿತು ನಿಮ್ಮ ಅಭಿಪ್ರಾಯವೇನು?
  7. ಈ ಕಥೆಗೆ ಸಂಬಂಧಿಸಿದಂತೆ ಮಕ್ಕಳ ನೈಜ ಜೀವನದಲ್ಲಿ ನಡೆದಿರುವ ಕೆಲವು ಘಟನೆಗಳನ್ನು ತರಗತಿಯಲ್ಲಿ ಸ್ನೇಹಿತರೊಂದಿಗೆ ಚರ್ಚಿಸಲು ತಿಳಿಸುವುದು.
     

ಇವರಿಗೆ ಸೂಕ್ತ: ಹಿರಿಯ ಪ್ರಾಥಮಿಕ ಹಂತ
ಕಥಾವಸ್ತು: ಪ್ರಾಣಿ ಮತ್ತು ಪಕ್ಷಿಗಳು,ಭಾವನೆಗಳು,ಸ್ವಾರ್ಥ
ಗುರುತು ಪಟ್ಟಿ: ತರಗತಿ ೪,ತರಗತಿ ೫,ತರಗತಿ ೬,ತರಗತಿ ೭
ಕಥೆಯ ಚಟುವಟಿಕೆ ಪುಟಕ್ಕೆ ಇಲ್ಲಿ ಕ್ಲಿಕ್ಕಿಸಿ
...more
View all episodesView all episodes
Download on the App Store

ಕಥೆ ಖಜಾನೆ - ಕನ್ನಡBy Kathe Khajane Team, IT for Change