ಸಿರಿದನಿ SIRIdani

ಕೃತಕ ಬುದ್ಧಿಮತ್ತೆ– ವಿಜ್ಞಾನಿ, ನಟ ತೇಜಸ್‌ ಅವರೊಂದಿಗೆ ಮಾತುಕತೆ


Listen Later

ಕೃತಕ ಬುದ್ಧಿಮತ್ತೆ (ಆರ್ಟಿಫೀಷಿಯಲ್‌ ಇಂಟಲಿಜೆನ್ಸ್‌) ಈಗ ವಿಶ್ವದಾದ್ಯಂತ ಅತಿ ಹೆಚ್ಚು ಚರ್ಚೆ ಮತ್ತು ಪ್ರಚಲಿತದಲ್ಲಿರುವ ಕ್ಷೇತ್ರ. ಭಾರತದಲ್ಲಿ ಈ ಕ್ಷೇತ್ರದಲ್ಲಿ ಸಾಕಷ್ಟು ಹೂಡಿಕೆ ಆಗುತ್ತಿದೆ. ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಅಧ್ಯಯನ ವಿಷಯಗಳೂ ಬಂದಿವೆ. ಅದೊಂದು ಅವಕಾಶಗಳ ಆಗರ. 

ಆದರೆ ಈ ಬಗ್ಗೆ ಕೆಲವು ಶಿಕ್ಷಕರು ಮೇಲ್ನೋಟದ ಸೀಮಿತ ಮಾಹಿತಿಯನ್ನು ಕೆಲವು ಜಾಲತಾಣಗಳ ಮೂಲಕ ನೀಡಿದ್ದಾರೆ. ಆದರೆ ಸಿರಿದನಿಯಲ್ಲಿ ನಮಗೆ ಆ ಕ್ಷೇತ್ರದಲ್ಲಿ ಹತ್ತಾರು ವರ್ಷ ಕೆಲಸ ಮಾಡಿ ಅನುಭವವುಳ್ಳ ವಿಜ್ಞಾನಿ, ನಟ ತೇಜಸ್‌ ಅವರು ಆ ಕ್ಷೇತ್ರದ ಆಳ ಅಗಲವನ್ನು ಕೇಳುಗರಿಗಾಗಿ ತೆರೆದಿಟ್ಟಿದ್ದಾರೆ. ಹಾಗಾಗಿ ಕನ್ನಡ ಭಾಷೆಯಲ್ಲಿ ಈ ಕ್ಷೇತ್ರದ ಪರಿಚಯ ಮಾಡುತ್ತಿರುವುದು ಮೊದಲ ಪ್ರಯತ್ನ.

ತೇಜಸ್‌ ಅವರು ವಿಶ್ವದ ಪ್ರತಿಷ್ಠಿತ ಕಂಪನಿಗಳಾದ ಗೂಗಲ್‌, ಮೈಕ್ರೋ ಸಾಫ್ಟ್‌ ಕಂಪನಿಗಳಲ್ಲಿ ಉನ್ನತ ಸಂಶೋಧನಾ ತಂಡಗಳಲ್ಲಿ ಕೆಲಸ ಮಾಡಿದವರು. ಚಲನಚಿತ್ರ ಅವರ ಆಸಕ್ತಿ ಮತ್ತು ಅಭಿರುಚಿ. ಕನ್ನಡದಲ್ಲಿ  ಇತ್ತೀಚೆಗೆ ತೆರೆಕಂಡ ‘ರಿವೈಂಡ್‌’ ಚಿತ್ರದ ನಿರ್ಮಾಪಕ, ನಿರ್ದೇಶಕ ಮತ್ತು ನಾಯಕ ನಟ. ಹೀಗೆ ತೇಜಸ್‌ ಒಬ್ಬರು ಬಹುಮುಖ ಪ್ರತಿಭೆ. 

ಇದು ತೇಜಸ್‌ ಅವರ ಸಂದರ್ಶನ ಅಲ್ಲ. ಕೃತಕ ಬುದ್ಧಿಮತ್ತೆ ಕ್ಚೇತ್ರದ ಕುರಿತು ಸೀಮಿತ ಅವಧಿಯಲ್ಲಿ ಸಮಗ್ರ ಮಾಹಿತಿ ನೀಡುವ ಪ್ರಯತ್ನ. ಇನ್ನಷ್ಟು ವಿವರಣೆಗೆ ತಾವು ಆಸಕ್ತಿ ವ್ಯಕ್ತಪಡಿಸಿದಲ್ಲಿ ತೇಜಸ್‌ ಅವರು ಸಿರಿದನಿಯೊಂದಿಗೆ ಸದಾ ಸಿದ್ಧರಿದ್ದಾರೆ. ಕೇಳಿ. ನಿಮ್ಮದೊಂದು ಪ್ರತಿಕ್ರಿಯೆ ಇರಲಿ

ನಿಮ್ಮ ಪ್ರತಿಕ್ರಿಯೆಗಾಗಿ ಇಮೇಲ್‌: [email protected]


- –ಸಿರಿದನಿ ತಂಡ


BAckground music used with thanks: https://www.youtube.com/watch?v=x3O9OXjK7pA











...more
View all episodesView all episodes
Download on the App Store

ಸಿರಿದನಿ SIRIdaniBy Shwetha Initiative