ಕಥೆ ಖಜಾನೆ - ಕನ್ನಡ

ಮೀನು ಕೇಳಿದ ವಾರ್ತೆ


Listen Later

ಲೇಖಕರು : ಸ್ಟೋರಿವೀವರ್ರಿಗಾಗಿ ವೆಂಕಟರಮಣ ಗೌಡ
ನಿರೂಪಕರು : ರೇಷ್ಮ
ಸಂಪಾದಕರು : ನಟೇಶ್ ಕುಮಾರ್ ಆರ್.ಜಿ

ಇದು ಅಂತಿಂಥ ಮೀನಲ್ಲ ಮನೆಯಲ್ಲಿ ರೇಡಿಯೋ ಇರುವ ಘನತೆವೆತ್ತ ಮೀನು. ವಾರ್ತಾ ಪ್ರಸಾರ ಕೇಳಿ ತನ್ನ ಕುಟುಂಬ ಮಾತ್ರವಲ್ಲದೇ, ಸಮಸ್ತ ಜಲಚರಗಳನ್ನೂ ರಕ್ಷಿಸಿದ ಅಪೂರ್ವ ಕಥೆಯೇ ಈ ‘ಮೀನು ಕೇಳಿದ ವಾರ್ತೆ.’

ಈ ಕಥೆಯ ಮೂಲಕ ಮಕ್ಕಳಿಗೆ ಸುದ್ದಿ ಮಾಧ್ಯಮದ ಪ್ರಾಮುಖ್ಯತೆಯ ತಿಳುವಳಿಕೆ ನೀಡಿ ಪ್ರಚಲಿತ ವಿದ್ಯಮಾನಗಳನ್ನು ತಿಳಿದುಕೊಳ್ಳುವಂತೆ ಪ್ರೇರೇಪಿಸುವುದು. ಕಥೆಗೆ ಸಂಬಂದಿಸಿದಂತೆ ಕೆಲವು ತರಗತಿಯ ಚಟುವಟಿಕೆಗಳು :

  1. ಮಕ್ಕಳಿಗೆ ದಿನಪತ್ರಿಕೆ ನೀಡಿ ಅದರಲ್ಲಿ ಬರುವ ವಿವಿಧ ಭಾಗಗಳನ್ನು ಪಟ್ಟಿ ಮಾಡಲು ತಿಳಿಸಿವುದು.
  2. ಮಕ್ಕಳೊಡನೆ ದಿನಪತ್ರಿಕೆ ಹಾಗೂ ವಾರ್ತೆಯ ಮೂಲಕ ಪ್ರಸಾರವಾಗುವ ಪ್ರಚಲಿತ ವಿದ್ಯಮಾನಗಳ ಕುರಿತು ಚರ್ಚಿಸಬಹುದು.
  3. ಜಲವಾಸಿ ಹಾಗೂ ಉಭಯವಾಸಿ ಪ್ರಾಣಿಗಳ ಕುರಿತಾಗಿ ಚರ್ಚಿಸಬಹದು.
  4. "ನಿಮ್ಮ ಮನೆಯ ಸದಸ್ಯರೊಬ್ಬರು ವಾರ್ತೆ ಕೇಳುವ ಸಮಯದಲ್ಲಿ ನಿಮ್ಮ ನೆಚ್ಚಿನ ಕಾರ್ಯಕ್ರಮ ಪ್ರಸಾರವಾಗುತ್ತಿದ್ದರೆ ನೀವು ಏನು ಮಾಡುತ್ತಿದ್ದಿರಿ" ಎಂದು ಕೇಳುವ ಮೂಲಕ ಅವರ ಅನುಭವವನ್ನು ಹಂಚಿಕೊಳ್ಳಲು ಅವಕಾಶ ಮಾಡಿಕೊಡುವುದು.
  5. ಈ ಕಥೆಯನ್ನು ಕೇಳಿದ ನಂತರ ಮಕ್ಕಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತಹ ಅಂಶಗಳಾವುವು ಎಂದು ಚರ್ಚಿಸುವುದು.
     

ಇವರಿಗೆ ಸೂಕ್ತ: ಹಿರಿಯ ಪ್ರಾಥಮಿಕ ಹಂತ
ಕಥಾವಸ್ತು: ಕುಟುಂಬ,ಪ್ರಾಣಿ ಮತ್ತು ಪಕ್ಷಿಗಳು,ಬುದ್ಧಿವಂತಿಕೆ ಮತ್ತು ಚತುರತೆ
ಗುರುತು ಪಟ್ಟಿ: ತರಗತಿ ೪,ತರಗತಿ ೫,ತರಗತಿ ೬,ತರಗತಿ ೭
ಕಥೆಯ ಚಟುವಟಿಕೆ ಪುಟಕ್ಕೆ ಇಲ್ಲಿ ಕ್ಲಿಕ್ಕಿಸಿ
...more
View all episodesView all episodes
Download on the App Store

ಕಥೆ ಖಜಾನೆ - ಕನ್ನಡBy Kathe Khajane Team, IT for Change