ಕಥೆ ಖಜಾನೆ - ಕನ್ನಡ

ಮರ ಕಡಿಯುವಾತ


Listen Later

ಲೇಖಕರು : ಸ್ಟೋರಿವೀವರ್ರಿಗಾಗಿ ವೀಣ ಶೇಷಾದ್ರಿ
ನಿರೂಪಕರು : ಕೆ.ಜಿ ಬಸವರಾಜ್
ಸಂಪಾದಕರು : ಸಿದ್ದರಾಮೇಶ್ವರ

ಒಂದು ದಿನ ಬೆಳಗ್ಗೆ ಕಟ್ಟಿಗೆ ಕಡಿವ ಗುರಾ ಸ್ವಲ್ಪ ಸೌದೆಯನ್ನು ತರಲು ಕಾಡಿಗೆ ಹೊರಟ. ಒಂದು ಮರವನ್ನು ಏರಿ ಒಂದು ದೊಡ್ಡ ರೆಂಬೆಯ ಕೊನೆಯಲ್ಲಿ ಕುಳಿತುಕೊಂಡ. ನಂತರ ತಾನು ಕುಳಿತಿದ್ದ ರೆಂಬೆಯನ್ನು ಕಡಿಯಲು ಶುರು ಮಾಡಿದ. ಆ ಹಾದಿಯಲ್ಲಿ ಹೋಗುತ್ತಿದ್ದ ಗ್ರಾಮದ ಪೂಜಾರಿ, ಮರ ಗುರಾನನ್ನು ನೋಡಿ ನಿಂತು ಮಾತಾಡಿದ. ಹೀಗೆ ಮಾಡಿದರೆ ರೆಂಬೆ ಮುರಿದು, ನೀನು ಕೆಳಗೆ ಬಿದ್ದು ಸಾಯುವೆ ಎಂದು ಪೂಜಾರಿ ಎಚ್ಚರಿಸಿದ. ಮುಂದೇನಾಯಿತು ಎಂದು ತಿಳಿಯಲು ಇಥಿಯೋಪಿಯಾದ ಈ ಜಾನಪದ ಕಥೆ ಓದಿ.

ಕಥೆಯ ಮೂಲಕ ಮಕ್ಕಳಿಗೆ ಮರಗಳ ಅವಶ್ಯಕತೆ ಹಾಗೂ ಅವುಗಳ ನಾಶದಿಂದ ಆಗುವ ಪರಿಣಾಮಗಳ ಕರಿತು ತಿಳಿಸಿಕೊಡಬಹುದು. ಕಥೆಗೆ ಸಂಬಂಧಿಸಿದಂತೆ ಕೆಲವು ತರಗತಿ ಚಟುವಟಿಕೆಗಳು.

  1. ಕಥೆಯನ್ನು ತಮ್ಮ ಸ್ವಂತ ಮಾತುಗಳಲ್ಲಿ ಹೇಳುವಂತೆ ಮಕ್ಕಳಿಗೆ ತಿಳಿಸುವುದು.
  2. ಮರಗಳನ್ನು ಕಡಿಯುವ ಕಾರಣಗಳ ಕುರಿತು ಚರ್ಚಿಸುವುದು.
  3. ಮರಗಳ ಪ್ರಾಮುಖ್ಯತೆಯನ್ನು ಗುಂಪಿನಲ್ಲಿ ಚರ್ಚಿಸುವಂತೆ ತಿಳಿಸುವುದು.
  4. ಮರಗಳ ವಿನಾಶದಿಂದ ಆಗುವ ದುಷ್ಪರಿಣಾಮಗಳ ಕುರಿತಾಗಿ ಚರ್ಚಿಸುವುದು.
  5. ಕಥೆಯನ್ನು ನಾಟಕ ಶೈಲಿಯಲ್ಲಿ ಅಭಿನಯಿಸಲು ಮಕ್ಕಳಿಗೆ ಪ್ರೋತ್ಸಾಹಿಸಿ ಮಾರ್ಗದರ್ಶನ ನೀಡುವುದು.
  6. ಇನ್ನಷ್ಟು ಕುತೂಹಲಕಾರಿಯಾಗಿ ಮುಂದುವರಿಯುವಂತೆ ಕಥೆಯನ್ನು ಮರುಸೃಷ್ಠಿ ಮಾಡುವಂತೆ ತಿಳಿಸುವುದು.
     

ಇವರಿಗೆ ಸೂಕ್ತ: ಹಿರಿಯ ಪ್ರಾಥಮಿಕ ಹಂತ
ಕಥಾವಸ್ತು: ದುರಾಸೆ,ಪರಿಸರ ಮತ್ತು ವಾತಾವರಣ,ಹಾಸ್ಯ
ಗುರುತು ಪಟ್ಟಿ: ತರಗತಿ ೪,ತರಗತಿ ೫,ತರಗತಿ ೬,ತರಗತಿ ೭
ಕಥೆಯ ಚಟುವಟಿಕೆ ಪುಟಕ್ಕೆ ಇಲ್ಲಿ ಕ್ಲಿಕ್ಕಿಸಿ
...more
View all episodesView all episodes
Download on the App Store

ಕಥೆ ಖಜಾನೆ - ಕನ್ನಡBy Kathe Khajane Team, IT for Change