ಕಥೆ ಖಜಾನೆ - ಕನ್ನಡ

ನನ್ನಯ ಕುದುರೆ


Listen Later

ಲೇಖಕರು : ಸ್ಟೋರಿವೀವರ್ರಿಗಾಗಿ ಡಾ ಸಿದ್ದಯ್ಯ ಪುರಾಣಿಕ್
ನಿರೂಪಕರು : ಕೃಷ್ಣಮೂರ್ತಿ
ಸಂಪಾದಕರು : ಮನಿಷ್

ಇದು ಬರಿ ಕೋಲು ಅಂತ ಹೇಳಿದ್ದು ಯಾರು? ಇದು ಕುದುರೆಯೇ. ಬೇಕೆಂದ ಕಡೆ ಅದು ಪ್ರಯಾಣಿ ಸಬಲ್ಲುದು. ಕಲ್ಪನೆಯಂತೆ ಅದು ಎಷ್ಟೊಂದು ಜಾಗಗಳಿಗೆ ಕರೆದುಕೊಂಡೂ ಹೋಗಬಹುದು. ಡಾ.ಸಿದ್ಧಯ್ಯ ಪುರಾಣಿಕ ಅವರ ನನ್ನ ಕುದುರೆ ಕವನ ಮಕ್ಕಳ ಜನಪ್ರಿಯ ಸಾಹಿತ್ಯ ಗುಚ್ಛದ ಭಾಗವಾಗಿದೆ.

ಈ ಕಥೆಯ ಮೂಲಕ ಮಕ್ಕಳಿಗೆ ಪ್ರಾಸಪದ ಎಂದರೇನು ಎಂಬ ವ್ಯಾಕರಣಾಂಶ ಪರಿಚಯಿಸಿ ಪಠ್ಯದಲ್ಲಿ ಬರುವಂತಹ ಪ್ರಾಸಪದಗಳನ್ನು ಗುರುತಿಸುವ ಸಾಮರ್ಥ್ಯ ವೃದ್ಧಿಸಬಹುದು. ಕಥೆಗೆ ಸಂಬಂದಿಸಿದಂತೆ ಮಾಡಬಹುದಾದ ಕೆಲವು ತರಗತಿಯ ಚಟುವಟಿಕೆಗಳು :

  1. ಮಕ್ಕಳು ಈ ಮೊದಲು ಕೇಳಿರುವ ಪ್ರಾಸ ಕವಿತೆಗಳು ಯಾವುವು ಹಾಗೂ ಅವುಗಳಲ್ಲಿ ಮಕ್ಕಳಿಗೆ ಇಷ್ಟವಾದ ಕವಿತೆ ಯಾವುದೆಂದು ಚರ್ಚಿಸುವುದು.
  2. ಮಕ್ಕಳೊಂದಿಗೆ ಗುಂಪು ಗಾಯನ ಮಾಡಬಹುದು.
  3. ಪಠ್ಯದಲ್ಲಿ ಬರುವ ಪ್ರಾಸಪದಗಳನ್ನು ಗುರುತಿಸುವಂತೆ ತಿಳಿಸುವುದು.
  4. ಮಕ್ಕಳು ಯಾವುದಾದರೂ ವಸ್ತುವನ್ನು ಕುರಿತಂತೆ ಕಾಲ್ಪನಿಕ ಕವಿತೆ/ ಕಥೆ ರಚಿಸಿ ಹೇಳಲು ತಿಳಿಸಬಹುದು
  5. ಮಕ್ಕಳಿಗೆ ತಮ್ಮ ಕುಟುಂಬದ ಮೂಲಕ ಗಮನಕ್ಕೆ ಬಂದಿರುವ ಯಾವುದಾದರೂ ಶೈಲಿಯ ಹಾಡುಗಳ ಅನುಭವವನ್ನು ಹಂಚಿಕೊಳ್ಳಲು ತಿಳಿಸುವುದು.

ಇವರಿಗೆ ಸೂಕ್ತ: ಹಿರಿಯ ಪ್ರಾಥಮಿಕ ಹಂತ
ಕಥಾವಸ್ತು: ಕಲೆ ಮತ್ತು ಸಂಸ್ಕ್ರುತಿ,ಕವನ ಮತ್ತು ಪದ್ಯ
ಗುರುತು ಪಟ್ಟಿ: ತರಗತಿ ೪,ತರಗತಿ ೫,ತರಗತಿ ೬,ತರಗತಿ ೭
ಕಥೆಯ ಚಟುವಟಿಕೆ ಪುಟಕ್ಕೆ ಇಲ್ಲಿ ಕ್ಲಿಕ್ಕಿಸಿ
...more
View all episodesView all episodes
Download on the App Store

ಕಥೆ ಖಜಾನೆ - ಕನ್ನಡBy Kathe Khajane Team, IT for Change