ಕಥೆ ಖಜಾನೆ - ಕನ್ನಡ

ರಾಜನ ಕಿರೀಟ


Listen Later

ಲೇಖಕರು : ಸ್ಟೋರಿವೀವರ್ರಿಗಾಗಿ ರಿಚಾ ಭಾಸ್ಕರ್
ನಿರೂಪಕರು : ಬಸವರಾಜಪ್ಪ ಎನ್
ಸಂಪಾದಕರು : ನಾಗವೇಣಿ

ರಾಜ 'ಅನವ್ರತ' ಎತ್ತರದ ದೇಗುಲವನ್ನು ಕತ್ತೆತ್ತಿ ನೋಡುವಾಗ ಆತನ ಕಿರೀಟ ಕೆಳಗೆ ಬಿತ್ತು. ರಾಜ ತನ್ನ ಕಿರೀಟ ಬೀಳದಂತೆ ಗೋಪುರ ನೋಡಲು ಏನು ಮಾಡಿದ ಎಂಬುದನ್ನು ತಿಳಿಯಲು ಮಯಾನ್ಮಾರ್‌ ಈ ಕಥೆ ಓದಿ.

ಕಥೆಯ ಮೂಲಕ ಮಕ್ಕಳಿಗೆ ವಿಜ್ಞಾನಕ್ಕೆ ಸಂಬಂಧಿಸಿದ ಪ್ರತಿಬಿಂಬದ ಕುರಿತಾಗಿ ಮಕ್ಕಳಿಗೆ ತಿಳಿಸಿಕೊಡಬಹುದು ಅಲ್ಲದೇ ಇತಿಹಾಸದಲ್ಲಿ ರಾಜರುಗಳು ನಿರ್ಮಿಸಿದ ದೇವಾಲಯಗಳ ಕುರಿತು ಚರ್ಚಿಸುತ್ತಾ ಹೊಸ ಪದಗಳ ಪರಿಚಯವನ್ನು ಮಕ್ಕಳಿಗೆ ಮಾಡಿಕೊಡಬಹುದು. ಕಥೆಗೆ ಸಂಬಂಧಿಸಿದ ಕೆಲವು ತರಗತಿ ಚಟುವಟಿಕೆಗಳು.

  1. ಕಥೆಯನ್ನು ಮಕ್ಕಳು ತಮ್ಮ ಸ್ವಂತ ಮಾತುಗಳಲ್ಲಿ ಹೇಳುವಂತೆ ತಿಳಿಸುವುದು
  2. ಕಥೆಯಲ್ಲಿನ ಹೊಸ ಪದಗಳಿಗೆ ಅರ್ಥ ತಿಳಿಸುವುದು.
  3. ಮಕ್ಕಳಿಗೆ ತಿಳಿದಿರುವ ರಾಜರುಗಳು ಹಾಗೂ ರಾಜ ಮನೆತನಗಳನ್ನು ಪಟ್ಟಿ ಮಾಡುವುದು.
  4. ರಾಜರು ನಿರ್ಮಿಸಿರುವ ಕಟ್ಟಡಗಳು ಹಾಗೂ ದೇವಾಲಯಗಳ ಬಗ್ಗೆ ಮಕ್ಕಳಿಗೆ ತಿಳಿಸಿಕೊಡುವುದು.
  5. ರಾಜನ ಸ್ಥಾನದಲ್ಲಿ ನೀವಿದ್ದಿದ್ದರೆ ಏನು ಮಾಡುತ್ತಿದ್ದಿರಿ ಎಂಬುದನ್ನು ಮಕ್ಕಳು ಕಲ್ಪಿಸಿಕೊಂಡು ಹೇಳುವಂತೆ ತಿಳಿಸುವುದು. 
  6. ರಾಜನಿಗೆ ಎದುರಾದ ಸಮಸ್ಯೆಗೆ ನೀವು ಏನೆಲ್ಲಾ ಸಲಹೆ ನೀಡುವಿರಿ ಎಂದು ಮಕ್ಕಳಿಗೆ ಪ್ರಶ್ನಿಸುವುದು.
     

ಇವರಿಗೆ ಸೂಕ್ತ: ಹಿರಿಯ ಪ್ರಾಥಮಿಕ ಹಂತ
ಕಥಾವಸ್ತು: ಬುದ್ಧಿವಂತಿಕೆ ಮತ್ತು ಚತುರತೆ,ವಿಜ್ಞಾನ,ಇತಿಹಾಸ
ಗುರುತು ಪಟ್ಟಿ: ತರಗತಿ ೪,ತರಗತಿ ೫,ತರಗತಿ ೬,ತರಗತಿ ೭
ಕಥೆಯ ಚಟುವಟಿಕೆ ಪುಟಕ್ಕೆ ಇಲ್ಲಿ ಕ್ಲಿಕ್ಕಿಸಿ
...more
View all episodesView all episodes
Download on the App Store

ಕಥೆ ಖಜಾನೆ - ಕನ್ನಡBy Kathe Khajane Team, IT for Change