ಕಥೆ ಖಜಾನೆ - ಕನ್ನಡ

ರೊಟ್ಟಿ ಸುರುಳಿ


Listen Later

ಲೇಖಕರು : ಸ್ಟೋರಿವೀವರ್ರಿಗಾಗಿ ಅಮರ್ ಗೋಸ್ವಾಮಿ
ನಿರೂಪಕರು : ಕೆ.ಜಿ ಬಸವರಾಜ್
ಸಂಪಾದಕರು : ವೀರಭದ್ರಯ್ಯ ಎಂ.ಬಿ

ಭೋಂಕು ನಾಯಿಯ ರೊಟ್ಟಿ ಕಿತ್ತುಕೊಂಡವರು ಯಾರು? ಆ ರೊಟ್ಟಿ ಕೊನೆಗೂ ಭೋಂಕು ಬಾಯಿ ಸೇರಿತಾ? ತಿಳಿಯಿರಿ.

ಪರಿಸರದಲ್ಲಿ ಕಂಡುಬರುವ ಪ್ರಾಣಿ-ಪಕ್ಷಿಗಳು ಉಂಟುಮಾಡುವ ಶಬ್ದಗಳು ಹಾಗೂ ಅವುಗಳು ತಮ್ಮ ಆಹಾರಕ್ಕಾಗಿ ಪಡುವ ಸಂಕಷ್ಟಗಳ ಕುರಿತು ತಿಳಿಸಿಕೊಡಬಹುದು. ಅಲ್ಲದೇ ಈ ಕಥೆಯಿಂದ ಸರಳ ವಾಕ್ಯ ರಚನೆ ಮಾಡುವುದನ್ನು ಮಕ್ಕಳಿಗೆ ತಿಳಿಸಿಕೊಡಬಹುದು. ಕಥೆಗೆ ಸಂಬಂದಿಸಿದಂತೆ ಮಾಡಬಹುದಾದ ಕೆಲವು ತರಗತಿಯ ಚಟುವಟಿಕೆಗಳು :

  1. ಮಕ್ಕಳಿಗೆ ನೂತನ ಪದಗಳನ್ನು ಹೇಳಿಕೊಡುವುದು.
  2. ಪರಿಸರದಲ್ಲಿ ಕಾಣಸಿಗುವ ಪ್ರಾಣಿ ಪಕ್ಷಿಗಳು ಹಾಗೂ ಅವುಗಳು ಉಂಟುಮಾಡುವ ಶಬ್ದಗಳ ಕುರಿತು ಚರ್ಚಿಸಬಹುದು.
  3. ಪ್ರಾಣಿ-ಪಕ್ಷಿಗಳಿಗೆ ಆಹಾರ ನೀಡುವ ಕುರಿತು ಮಕ್ಕಳಿಗೆ ಆಗಿರುವ ಅನುಭವವನ್ನು ಸಂಗ್ರಹಿಸುವುದು.
  4. ಮಕ್ಕಳ ಆಹಾರವನ್ನು ಇತರರು ಕಸಿದುಕೊಂಡಾಗ ಅವರಲ್ಲುಂಟಾಗುವ ಭಾವನೆಗಳ ಕುರಿತು ಚರ್ಚಿಸುವುದು.
  5. "ನಿಮ್ಮ ಸಾಕುಪ್ರಾಣಿಗೆ ನೀವು ನೀಡಿದ ಆಹಾರವನ್ನು ಬೇರೊಂದು ಪ್ರಾಣಿ ಕಿತ್ತಕೊಂಡು ಹೋಯಿತೆಂದರೆ ಆಗ ನೀವೇನು ಮಾಡುತ್ತಿದ್ದಿರಿ?" ಎಂದು ಮಕ್ಕಳನ್ನು ಕೇಳುವುದು.

     

ಇವರಿಗೆ ಸೂಕ್ತ: ಪ್ರಾಥಮಿಕ ಹಂತ
ಕಥಾವಸ್ತು: ಪ್ರಾಣಿ ಮತ್ತು ಪಕ್ಷಿಗಳು,ಶಬ್ದಕೋಶ,ಸ್ವಾರ್ಥ
ಗುರುತು ಪಟ್ಟಿ: ತರಗತಿ ೧,ತರಗತಿ ೨,ತರಗತಿ ೩,ತರಗತಿ ೪,ತರಗತಿ ೫
ಕಥೆಯ ಚಟುವಟಿಕೆ ಪುಟಕ್ಕೆ ಇಲ್ಲಿ ಕ್ಲಿಕ್ಕಿಸಿ
...more
View all episodesView all episodes
Download on the App Store

ಕಥೆ ಖಜಾನೆ - ಕನ್ನಡBy Kathe Khajane Team, IT for Change