ಕಥೆ ಖಜಾನೆ - ಕನ್ನಡ

ಸಿಂಹದ ಅಂಬಾರಿ


Listen Later

ಲೇಖಕರು : ಸ್ಟೋರಿವೀವರ್ರಿಗಾಗಿ ಅಮರ್ ಗೋಸ್ವಾಮಿ 
ನಿರೂಪಕರು : ಹಾಲೇಶ್ 
ಸಂಪಾದಕರು : ಸೋಮಶೇಖರ್ 

ಕಾಡಿನ ರಾಜನಾದ ಸಿಂಹ ನಾಡಿನ ರಾಜ ಅರಸನನ್ನು ಅನುಕರಣೆ ಮಾಡಲು ಹೊರಟ್ಟಿದ್ದಕ್ಕೆ ಏನಾಯ್ತು ಗೊತ್ತಾ? ಒಳ್ಳೆ ಕುಲುಕಾಟದ ದರ್ಬಾರ್! ಈ ತಮಾಷೆಯ ಕಥೆ ಕೇಳಿದರೆ ಸಮಾಚಾರವೇನೆಂದು ತಿಳಿಯುತ್ತದೆ.
ಈ ಕಥೆಯಲ್ಲಿ ಬರುವ ಹೊಸ ಪದಗಳನ್ನ ಮಕ್ಕಳಿಗೆ ಪರಿಚಯಿಸುವುದು. ಇನ್ನೊಬ್ಬರನ್ನ ಅನವಶ್ಯಕವಾಗಿ ಅನುಸರಿಸುದಕ್ಕಿಂತ ನಮ್ಮ ಸ್ವಂತ ವ್ಯಕ್ತಿತ್ವ ನಮಗಿರಬೇಕು ಎಂಬ ನೀತಿಯನ್ನ ಮಕ್ಕಳಿಗೆ ಅರ್ಥೈಸುವುದು. ಕಥೆಗೆ ಸಂಬಂದಿಸಿದಂತೆ ಕೆಲವು ತರಗತಿಯ ಚಟುವಟಿಕೆಗಳು : 

  1.  ಇನ್ನೊಬ್ಬರನ್ನ ಅನವಶ್ಯಕವಾಗಿ ಅನುಸರಿಸಿದರೆ ಆಗುವ ಅಪಾಯದ ಕುರಿತು ಚರ್ಚಿಸಬಹುದು. 
  2. ಪ್ರಾಣಿಗಳು ಹಾಗೂ ಅವುಗಳ ಗುಣಲಕ್ಷಣಗಳ ಕುರಿತು ಚರ್ಚಿಸಬಹುದು. 
  3.  ಹಿಂದಿನ ಕಾಲದಲ್ಲಿ ರಾಜನ ವೈಬೋಗಿಕ ಜೀವನ ಹಾಗೂ ಅಧಿಕಾರಗಳ ಕುರಿತು ವಿದ್ಯಾರ್ಥಿಗಳ ಕಲ್ಪನೆಗಳನ್ನ ಚರ್ಚಿಸಬಹುದು. 
  4. ಆನೆ ಅಂಬಾರಿ ಹೊರುವ ಕುರಿತು ವಿದ್ಯಾರ್ಥಿಗಳಿಗಿರುವ ಅನುಭವವನ್ನು ಚರ್ಚಿಸಬಹುದು.
     

ಇವರಿಗೆ ಸೂಕ್ತ: ಪ್ರಾಥಮಿಕ ಹಂತ
ಕಥಾವಸ್ತು: ಬುದ್ಧಿವಂತಿಕೆ ಮತ್ತು ಚತುರತೆ,ಸ್ವಾರ್ಥ,ಹಾಸ್ಯ
ಗುರುತು ಪಟ್ಟಿ: ತರಗತಿ ೧,ತರಗತಿ ೨,ತರಗತಿ ೩,ತರಗತಿ ೪,ತರಗತಿ ೫
ಕಥೆಯ ಚಟುವಟಿಕೆ ಪುಟಕ್ಕೆ ಇಲ್ಲಿ ಕ್ಲಿಕ್ಕಿಸಿ
...more
View all episodesView all episodes
Download on the App Store

ಕಥೆ ಖಜಾನೆ - ಕನ್ನಡBy Kathe Khajane Team, IT for Change