ಸದ್ಗುರುಗಳ ಒಂದು ಚೊಕ್ಕ, ಶಕ್ತಿಯುತ ಸಂದೇಶದೊಂದಿಗೆ ನಿಮ್ಮ ದಿನವನ್ನು ಸಂತೋಷದಾಯಕ, ಉತ್ಸಾಹಭರಿತವಾಗಿಸಿ. ಸದ್ಗುರುಗಳೊಂದಿಗೆ ಹಲವಾರು ವಿಷಯಗಳನ್ನು ಅನ್ವೇಷಿಸಿ, ಜೀವನದ ಪ್ರತಿಯೊಂದು ಅಂಶವು ಹೇಗೆ ಮುಂದಿನ ಹಾದಿಯನ್ನು ತೋರಿಸಬಲ್ಲದು ಹಾಗೂ ,
ನಮ್ಮಲ್ಲಿ ಹುದುಗಿರುವ ಸಾಮರ್ಥ್ಯವನ್ನು ಹೇಗೆ ಹೆಚ್ಚಿಸಬಹುದು ಎಂಬುದನ್ನು ಅರಿಯಿರಿ.
ಇಲ್ಲಿ ಸದ್ಗುರುಗಳು ವಿವರಿಸುವುದೇನೆಂದರೆ, ದೈವೀಕೃಪೆಯು ಎಲ್ಲಾ ಕಡೆ ಇದೆ. ಸಂಪೂರ್ಣವಾಗಿ ಗ್ರಹಣಶೀಲರಾಗಿರುವವರು ಅದನ್ನು ಅವರು ಎಲ್ಲಿದ್ದರೂ ಪಡೆದುಕೊಳ್ಳುವರು. ಅವರಿಗೆ ಒಂದು ಕಲ್ಲು ಕೂಡ ಗುರುವಾಗಬಹುದು. ಅಂತಹವರು ಅಪರೂಪ.
ಆದರೆ ತಮ್ಮದೇ ಮನಸ್ಸಿನಿಂದ ತುಂಬಿ ಹೋಗಿರುವ ಹೆಚ್ಚಿನವರಿಗೆ ಈ ಸರ್ವವ್ಯಾಪೀ ದೈವತ್ವವು ಅನುಭವಕ್ಕೆ ಬರದಿರಬಹುದು. ಅವರಿಗೆ ಅನುಭವಕ್ಕೆ ಬರುವಂತೆ ಮಾಡಲು ಒಂದು ರೀತಿಯ ಶಕ್ತಿಸ್ಥಿತಿಯನ್ನು ಏರ್ಪಡಿಸಬೇಕಾಗುತ್ತದೆ. ಆದ್ದರಿಂದ ದೇವಸ್ಥಾನ, ಧ್ಯಾನ, ಜೀವಂತ ಗುರು ಇತ್ಯಾದಿಗಳು ಅವರಿಗೆ ಬೇಕಾಗುತ್ತವೆ.
ಅದೂ ಅಲ್ಲದೆ ತಮ್ಮದೇ ಮನಸ್ಸಿನಿಂದ ತುಂಬಿಹೋಗಿರುವವರಿಗೆ ಅವರನ್ನು ಸತತವಾಗಿ ಸರಿದಾರಿಯಲ್ಲಿಡಲು ಅವರಿಗಿಂತ ಜಾಣ ಮನಸ್ಸು ಬೇಕು. ದೇಹತ್ಯಾಗ ಮಾಡಿರುವ ಗುರುವಿನೊಂದಿಗೆ ಅದು ಸಾಧ್ಯವಿಲ್ಲ. ಆದ್ದರಿಂದ ದೇಹತ್ಯಾಗ ಮಾಡಿದಂತಹ ಗುರುಗಳು ಅವರಿಗೆ ಒಂದು ಪ್ರೇರಣೆಯಾಗಬಹುದಷ್ಟೆ ಹೊರತು ಮಾರ್ಗದರ್ಶಕರಲ್ಲ.
ಯೋಗಿ, ಅಧ್ಯಾತ್ಮಿಕ ಚಿಂತಕ, ದಾರ್ಶನಿಕ - ಇಂತಹ ವಿಶೇಷಣಗಳಿಂದ ಗುರುತಿಸಲ್ಪಡುವ ಸದ್ಗುರುಗಳು, ಇತರರಿಗಿಂತ ಭಿನ್ನವಾಗಿ ನಿಲುವಂತಹ ಆಧ್ಯಾತ್ಮಿಕ ಗುರು. ಗಹನತೆ ಮತ್ತು ವಾಸ್ತವಿಕತೆಯನ್ನು ಒಳಗೂಡಿರುವ ಅವರ ಜೀವನ ಮತ್ತು ಕಾರ್ಯಗಳು, ಯೋಗವು ಸಮಕಾಲೀನ ವಿಜ್ಞಾನವಾಗಿದ್ದು, ನಮ್ಮ ಕಾಲಕ್ಕೆ ಅತ್ಯಗತ್ಯವಾದುದು ಎಂಬುದರ ಜ್ಞಾಪನೆಯಾಗಿದೆ.
See omnystudio.com/listener for privacy information.
Learn more about your ad choices. Visit megaphone.fm/adchoices