ಕು|ಸುಹಾನ ಸಯ್ಯದ್ ಎಂ., ಬಹು ಭಾಷಾ ಬರಹಗಾರ್ತಿ
ಇವರು ಕನ್ನಡ, ಹಿಂದಿ, ಇಂಗ್ಲೀಷ್ ಹೀಗೇ ಸುಮಾರು ಎಂಟು ಭಾಷೆ ಮಾತಾಡಬಲ್ಲರು. ಹದಿಮೂರನೇ ವರ್ಷದಲ್ಲೇ ಬರೆಯಲು ಆರಂಭಿಸಿದ ಇವರು ಮೂರು ಭಾಷೆಗಳಲ್ಲಿ ಕಥೆ, ಕವನ, ನಗೆಹನಿ, ಹಾಯ್ಕು, ಅಬಾಬಿ ,ಚುಟುಕು ಮುಂತಾದವುಗಳನ್ನು ಬರೆಯುತ್ತಾರೆ.
ಶಿಕ್ಷಣ ಮತ್ತು ವೃತ್ತಿ ಜೀವನ:
2001ರಿಂದ 2004ರವರೆಗೆ ತಮ್ಮ ಪ್ರೌಢ ಮತ್ತು ಕಾಲೇಜು ವಿದ್ಯಾಭ್ಯಾಸವನ್ನು ಬಂಟ್ವಾಳ ತಾಲೂಕಿನ ವಿಟ್ಲದ ಪದವಿ ಪೂರ್ವ ಕಾಲೇಜಿನಲ್ಲಿ ಮಾಡಿದ ಸುಹಾನರು, ತಮ್ಮ ಮೂರು ವರ್ಷದ ಪದವಿ ವಿದ್ಯಾಭ್ಯಾಸವನ್ನು ಬಂಟ್ವಾಳ ತಾಲೂಕಿನ ಅನುಗ್ರಹ ಕಾಲೇಜಿನಲ್ಲಿ ಪೂರೈಸಿದ್ದಾರೆ. 2019ರಲ್ಲಿ ತಮ್ಮ ಎಂ.ಕಾಂ ಪದವಿಯನ್ನು ಮಂಗಳೂರು ವಿಶ್ವವಿದ್ಯಾಲಯದಲ್ಲಿ ಪಡೆದುಕೊಂಡು, ಅದೇ ವರ್ಷ ಮಂಗಳೂರಿನ ಬರಾಕ ಕಾಲೇಜಿನಲ್ಲಿ ಉದ್ಯೋಗಕ್ಕೆ ಸೇರಿದ್ದಾರೆ.
ಅಲ್ಲದೇ ಓರ್ವ 'ಉನ್ನತ ಕ್ರಮದ ಆಲೋಚನಾ ಕೌಶಲ್ಯಗಳ' ತರಬೇತುಗಾರ್ತಿಯಾಗಿಯೂ ಮತ್ತು ಹಲವೆಡೆ ನಿರೂಪಕಿಯೂ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ನವಪರ್ವ ಫೌಂಡೇಶನ್ ಹೊರ ತಂದ ಸಂಪಾದನಾ ಕೃತಿಯಾದ 'ಪತಂಗ ಪರ್ವ'ದ ಸಹ ಬರಹಗಾರರಲ್ಲಿ ಒಬ್ಬರಾಗಿದ್ದು , 'ನವಪರ್ವ ಸವ್ಯ ಸಾಚಿ' ಬಿರುದಿಗೆ ಪಾತ್ರರಾಗಿದ್ದಾರೆ.
ಅಲ್ಲದೇ ನೂರಕ್ಕೂ ಹೆಚ್ಚು ಸಂಪಾದನಾ ಕೃತಿಯಲ್ಲಿನ ಸಹ ಬರಹಗಾರರಾಗಿದ್ದಾರೆ. ತಮ್ಮದೇ ಆದ ಆಂಗ್ಲ ಭಾಷೆಯ ಸಂಪಾದನಾ ಕೃತಿಯ ಸಿದ್ಧತೆಯಲ್ಲಿ ಇದ್ದಾರೆ.