ಕುವೈಟ್'ನ ಲೇಖಕ ತಾರೇಂದ್ರ ಪಿ. ಶೆಟ್ಟಿಗಾರ್ ಅವರ ಸಾಹಿತ್ಯ ಹಾಗೂ ನಿರ್ಮಾಣದ ಕನ್ನಡ ಭಕ್ತಿಗೀತೆಗಳ ಧ್ವನಿಸಾಂದ್ರಿಕೆ ಇತ್ತೀಚೆಗೆ ಬಿಡುಗಡೆಗೊಂಡಿದೆ. ಅದರ ಭಕ್ತಿಲಹರಿ ಸಿರಿದನಿಯಲ್ಲಿ ಕೇಳಿ. ಜೊತೆಗೆ ಗೀತೆರಚನೆಕಾರ ತಾರೇಂದ್ರ ಪಿ. ಶೆಟ್ಟಿಗಾರ್ ಅವರು ವಿದೇಶದಲ್ಲಿದ್ದು ತಮ್ಮ ನೆನಪಿನ ಭಾವಗಳನ್ನು ಇಲ್ಲಿ ತೆರೆದಿಟ್ಟಿದ್ದಾರೆ. ಅವರದೇ ಮಾತುಗಳಲ್ಲಿ ಕೇಳಿ.
ಈ ಮಂಗಳ ಮೂರುತಿ ಧ್ವನಿ ಸಾಂದ್ರಿಕೆಯನ್ನು ಉಡುಪಿಯ ಪರ್ಯಾಯ ಅದಮಾರು ಮಠದ ಪರಮ ಪೂಜ್ಯ ಶ್ರೀ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಬಿಡುಗಡೆಗೊಳಿಸಿ ಆಶೀರ್ವದಿಸಿದರು. ಸಾಹಿತ್ಯದ ಮೂಲಕ ಧಾರ್ಮಿಕ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಉತ್ತಮ ಪ್ರಜೆಯಾಗಿ ಬಾಳುವುದು ಉನ್ನತ ಸಂಕೇತವೆಂದು ಶೆಟ್ಟಿಗಾರ್ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ವೇಳೆ ಧ್ವನಿಸಾಂದ್ರಿಕೆ ಬಿಡುಗಡೆ ಕುವೈತ್, ಸಿಂಗಾಪುರ, ಉಡುಪಿ, ಚೆನೈ, ಬೆಂಗಳೂರಿನಲ್ಲಿ ಏಕಕಾಲದಲ್ಲಿ ನಡೆಯಿತು. ಮಂಗಳ ಮೂರುತಿ ಧ್ವನಿಸಾಂದ್ರಿಕೆಯಲ್ಲಿ ಆದಿಪೂಜಿತ, ಶಾಂಭವಿ ಸ್ತುತಿ, ಶುಭಾಂಕರ ಧ್ಯಾನ, ರಾಮ ನಾಮ, ಪಾರ್ಥ ಸಾರಥಿ ಹಾಗೂ ಪವನ ಸಂಜಾತ ಎಂಬ ಆರು ಭಕ್ತಿಗೀತೆಗಳಿವೆ.
ಸಂಗೀತ ನಿರ್ದೇಶನ: ಗಿರಿಧರ್ ದಿವಾನ್
ಸಂಗೀತ ಸಂಯೋಜನೆ: ನಕುಲ್ ಅಭ್ಯಂಕರ್
ಗಾಯನ: ಅಜಯ್ ವಾರಿಯರ್, ನಕುಲ್ ಅಭ್ಯಂಕರ್, ಸಿದ್ದಾರ್ಥ ಬೆಳ್ಮಣ್, ಐರಾ ಉಡುಪಿ ಹಾಗೂ ನಿನಾದ ನಾಯಕ್
ಹೆಚ್ಚಿನ ಗೀತೆಗಳನ್ನು ಕೇಳಲು Tharendra P Shettigar ಯುಟ್ಯೂಬ್ ಚಾನೆಲ್ಗೆ ಸಬ್ಸ್ಕ್ರೈಬ್ ಆಗಿ ವಿದೇಶದಲ್ಲಿ ಕನ್ನಡ ನೆಲ ಸಂಸ್ಕೃತಿಗೆ ತುಡಿಯುವ ಮನಸ್ಸನ್ನು ಬೆಂಬಲಿಸಿ. ನಿಮ್ಮ ಗೆಳೆಯರಿಗೂ ಹಂಚಿ.
ಯುಟ್ಯೂಬ್ ಲಿಂಕ್: https://www.youtube.com/channel/UCC3ufHOEdl8TFL-QAFSChHw
ಪ್ರತಿಕ್ರಿಯಿಸಿ: [email protected]