ಲೇಖಕರು : ಸ್ಟೋರಿವೀವರ್ರಿಗಾಗಿ ಕಿರಣ್ ಕಸ್ತೂರಿಯ
ನಿರೂಪಕರು : ಬಸವರಾಜ್ ಟಿ.ಡಿ
ಸಂಪಾದಕರು : ನಾಗವೇಣಿ
ಪ್ರತಿ ಬೆಳಿಗ್ಗೆ, ನಮ್ಮಲ್ಲಿ ಹಲವಾರು ಮಂದಿ ಅನುಭವಿಸುವ ಕಷ್ಟವನ್ನು ಭೀಮ ಕೂಡ ಅನುಭವಿಸುತ್ತಾನೆ. ಸಮಯಕ್ಕೆ ಸರಿಯಾಗಿ ಅವನಿಂದ ಏಳಲು, ಸಾಧ್ಯವಾಗುತ್ತಿರಲಿಲ್ಲ. ಅವನ ಒಬ್ಬ ಚಿಕ್ಕ ಸ್ನೇಹಿತ ಅವನಿಗೆ ಸಹಾಯ ಮಾಡುತ್ತಾನೆ. ಅದು ಹೇಗೆ ಎಂದು ಕೇಳಿ ತಿಳಿದುಕೊಳ್ಳಿ .
ಈ ಕಥೆಯ ಮೂಲಕ ಮಕ್ಕಳಿಗೆ ಹೊಸಪದಗಳ ಪರಿಚಯ ಮಾಡಿಕೊಡಬಹುದಲ್ಲದೇ ದೈನಂದಿನ ಉತ್ತಮ ಅಭ್ಯಾಸಗಳನ್ನು ತಿಳಿಸಿಕೊಡಬಹುದು ಹಾಗೂ ಕಥೆಯಲ್ಲಿ ಭೀಮನಿಗೆ ಆತನ ಸ್ನೇಹಿತರು ಸಹಾಯ ಮಾಡಿದಂತೆ ಮಕ್ಕಳಲ್ಲೂ ಕೂಡ ಸಹಾಯ ಮನೋಭಾವವನ್ನು ಮೂಡಿಸುವುದು. ಕಥೆಗೆ ಸಂಬಂಧಿಸಿದಂತೆ ಕೆಲವು ತರಗತಿಯ ಚಟುವಟಿಕೆಗಳು :
- ಮಕ್ಕಳಲ್ಲಿ ಉತ್ತಮ ಅಭ್ಯಾಸಗಳನ್ನ ಮೂಡಿಸುವಲ್ಲಿ ಮನೆಯವರ ಪ್ರಯತ್ನಗಳ ಕುರಿತು ಚರ್ಚಿಸಬಹುದು.
- ಕಥೆಯಲ್ಲಿ ಬಂದಂತಹ ಪ್ರಾಣಿಗಳು ಭೀಮನನ್ನು ಎಬ್ಬಿಸಲು ಹೇಗೆಲ್ಲಾ ಪ್ರಯತ್ನಿಸಿದವು ಎಂಬುದನ್ನ ನಿಮ್ಮ ಕಲ್ಪನೆಯಲ್ಲಿ ಹೇಳಿ.
- ನೊಣದ ಸಹಾಯವಿಲ್ಲದೆ ಭೀಮನು ಸ್ವತಃ ತಾನೇ ಎಚ್ಚರಗೊಳ್ಳುವಂತೆ ಕಥೆಯ ಅಂತ್ಯವನ್ನು ರಚಿಸಲು ತಿಳಿಸುವುದು.
- ಎಷ್ಟೇ ಪ್ರಯತ್ನಿಸಿದರೂ ಎಚ್ಚರಗೊಳ್ಳದ ಭೀಮನ ಕುರಿತು ಪ್ರಾಣಿಗಳ ಅಭಿಪ್ರಾಯವೇನಿರಬಹುದು? ನಿಮ್ಮ ಮಾತುಗಳಲ್ಲಿ ತಿಳಿಸಿ.
- ನೀವು ಕೂಡ ಭೀಮನ ಸ್ಥಿತಿಯಲ್ಲಿದ್ದು ಸಮಯಕ್ಕೆ ಏಳುವುದು ಸಾಧ್ಯವಾಗದಿದ್ದರೆ ನೀವು ಏನು ಮಾಡುತ್ತೀರಿ?
- ನೀವು ಭೀಮನ ಸ್ನೇಹಿತರೆಂದು ಭಾವಿಸಿ ಭೀಮನು ನಿದ್ರೆಯಿಂದ ಏಳಲು ಏನೆಲ್ಲಾ ಸಲಹೆಗಳನ್ನು ನೀಡುವಿರೀ?
- ಮಕ್ಕಳೇ ನೀವು ಮುಂಜಾನೆ ಬೇಗ ಏಳುವುದಕ್ಕೆ ಏನೆಲ್ಲಾ ಪ್ರಯತ್ನಗಳನ್ನು ಮಾಡುತ್ತೀರಿ ?
ಇವರಿಗೆ ಸೂಕ್ತ: ಪ್ರಾಥಮಿಕ ಹಂತ
ಕಥಾವಸ್ತು: ದಿನಚರಿ ಮತ್ತು ದೈನಂದಿನ ಅಭ್ಯಾಸಗಳು,ಸಹಾಯ - ಸಹಕಾರ,ಹಾಸ್ಯ
ಗುರುತು ಪಟ್ಟಿ: ತರಗತಿ ೧,ತರಗತಿ ೨,ತರಗತಿ ೩,ತರಗತಿ ೪,ತರಗತಿ ೫
ಕಥೆಯ ಚಟುವಟಿಕೆ ಪುಟಕ್ಕೆ ಇಲ್ಲಿ ಕ್ಲಿಕ್ಕಿಸಿ